ಮುಲ್ ಫೋರ್ಡ್ ಜತೆ ಚಿದು ಚರ್ಚೆ
ನವದೆಹಲಿ, ಡಿ. 22 : ಮುಂಬೈ ಭಯೋತ್ಪಾದನೆಗೆ ಸಂಬಂಧಿಸಿದಂತೆ ಪಾಕ್ ನಲ್ಲಿ ಅಡಗಿರುವ ಉಗ್ರರನ್ನು ಬಂಧನಕ್ಕೆ ಭಾರತಕ್ಕೆ ಎಲ್ಲ ಸಹಾಯ, ಸಹಕಾರ ನೀಡುತ್ತಿದ್ದು, ಮುಂಬೈ ದಾಳಿಯ ನಂತರ ಆಗಿರುವ ಬೆಳವಣಿಗೆ, ತೆಗೆದುಕೊಳ್ಳಲಾಗಿರುವ ಎಲ್ಲ ಕ್ರಮಗಳ ಬಗ್ಗೆ ಕೇಂದ್ರದ ಗೃಹ ಸಚಿವ ಪಿ ಚಿದಂಬರಂ ಹಾಗೂ ಅಮೆರಿಕದ ರಾಯಭಾರಿ ಡೆವಿಡ್ ಮುಲ್ ಫೋರ್ಡ್ ಅರ್ಧ ಗಂಟೆ ಚರ್ಚೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.
ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿ ಬಿದ್ದಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ವಿಚಾರಣೆ ನಡೆಸಿರುವ ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ ವೆಸ್ಟಿಗೇಷನ್ (ಎಫ್ ಬಿಐ), ಪಾಕಿಸ್ತಾನ ಕೃಪಾಪೋಷಿತ ಲಷ್ಕರ್ ಇ ತೊಯ್ಬಾ ಸಂಘಟನೆಯ ಬೆಂಬಲದಿಂದಲೇ ಈ ಕೃತ್ಯ ಎಸಗಲಾಗಿದೆ. ಪಾಕಿಸ್ತಾನದ ಐಎಸ್ಐನ ನೇರ ಕೈವಾಡವಿರುವುದು ತನಿಖೆಯಿಂದ ಬಹಿರಂಗಗೊಂಡಿದೆ.
ಈ ಹಿನ್ನೆಲೆಯಲ್ಲಿ ಏಳು ವರ್ಷಗಳ ಹಿಂದೆ ಅಮೆರಿಕದ ವಾಣಿಜ್ಯ ಸಂಕೀರ್ಣದ ಮೇಲೆ ಅಲ್ ಖೈದಾ ನೆಡೆಸಿದ ಕೃತ್ಯ, ಅದರ ನಂತರ ಅಮೆರಿಕ ತೆಗೆದುಕೊಂಡ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವಿಸ್ತೃತವಾಗಿ ಚರ್ಚೆಸಲಾಗಿದೆ ಎನ್ನಲಾಗಿದೆ. ಉಗ್ರರನ್ನು ಮಟ್ಟ ಹಾಕಲು ಭಾರತಕ್ಕೆ ಬೇಕಿರುವ ಎಲ್ಲ ಸಹಕಾರ ನೀಡುವುದಾಗಿ ಪೆಂಟಾಗಾನ್ ಕಚೇರಿ ಮತ್ತೊಮ್ಮೆ ಸ್ಪಷ್ಟಪಡಿಸಿದೆ.
(ದಟ್ಸ್
ಕನ್ನಡ
ವಾರ್ತೆ)
ಪಾಕ್
ತಪ್ಪಿಸಿಕೊಳ್ಳಲು
ಸಾಧ್ಯವಿಲ್ಲ:ಪ್ರಣಬ್