ಅಕ್ರಮ ಗಣಿಗಾರಿಕೆ, ಲೋಕಾಯುಕ್ತ ವರದಿ ಸಲ್ಲಿಕೆ
ಬೆಂಗಳೂರು, ಡಿ. 19 : ರಾಜ್ಯದ ವಿವಿಧೆಡೆ 2000 ದಿಂದ 2006ರ ವರೆಗೆ ನಡೆದಿರುವ ಅಕ್ರಮ ಗಣಿಗಾರಿಕೆಗಳ ಕುರಿತು ಲೋಕಾಯುಕ್ತರು ಗುರುವಾರ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದರು. ಲೋಕಾಯುಕ್ತ ನ್ಯಾಯಮೂರ್ತಿ ಎನ್ ಸಂತೋಷ ಹೆಗ್ಡೆ ಅವರ ಪರವಾಗಿ ಸಂಸ್ಥೆಯ ರಿಜಿಸ್ಟ್ರಾರ್ ಎಲ್ ಸುಬ್ರಮಣ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ ಸುಧಾಕರರಾವ್ ಅವರನ್ನು ಭೇಟಿ ಮಾಡಿ 274 ಪುಟಗಳ ಸಮಗ್ರ ವರದಿ ಮತ್ತು ಆರೋಪ ಪುಷ್ಟೀಕರಿಸುವ 1000 ದಾಖಲೆಗಳನ್ನು ಸಲ್ಲಿಸಿದರು.
ಅಕ್ರಮ ಗಣಿಗಾರಿಕೆಯಿಂದ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ರುಪಾಯಿ ನಷ್ಟವಾಗಿದೆ. ಅತಿ ಕಡಿಮೆ ರಾಜಧನ ನಿಗದಿ ಮಾಡಿರುವುದು ಕೂಡಾ ನಷ್ಟಕ್ಕೆ ಕಾರಣವಾಗಿದೆ. ಗಣಿ ಗುತ್ತಿಗೆಯಿಂದ ಅದಿರು ರಫ್ತು ಮಾಡುವವರೆಗಿನ ಅವ್ಯವಹಾರಗಳ ಕುರಿತು ಸಮಗ್ರವಾದ ತನಿಖೆ ನಡೆಸಿ ವರದಿ ನೀಡಲಾಗಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಎನ್ ಸಂತೋಷ ಹೆಗ್ಡೆ ಹೇಳಿದರು.
(ದಟ್ಸ್
ಕನ್ನಡ
ವಾರ್ತೆ)
ಪೂರಕ
ಓದಿಗೆ:
ಲೋಕಾಯುಕ್ತ
ದಾಳಿ,
16
ಕೋಟಿ
ರು
ವಶ
ಗಣಿ
ವಿವಾದ:
ದಿವಾಕರ್
ಬಾಬು
ಮೇಲೆ
ಲಾಠಿ
ಪ್ರಹಾರ
ಅಕ್ರಮ
ಗಣಿ
ವ್ಯವಹಾರ
:
ಗಣಿಧಣಿಗಳಿಗೆ
ನೋಟೀಸ್
ಅಕ್ರಮ
ಗಣಿಗಾರಿಕೆ
ತನಿಖಾ
ವರದಿ
ಸಿದ್ಧ:
ಲೋಕಾಯುಕ್ತ