ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಂತಾಮಣಿ ಬಾವಿಗೆ ಬಿದ್ದು ಆರು ಜನ ಸಾವು

By Staff
|
Google Oneindia Kannada News

ಚಿಂತಾಮಣಿ, ಡಿ. 19 : ಕ್ರಿಸ್ ಮಸ್ ರಜೆ ಕಳೆಯಲು ಚಿಂತಾಮಣಿ ಸಮೀಪದ ಮುರುಗಮಲ್ಲ ದರ್ಗಾಕ್ಕೆ ಬಂದಿದ್ದ ಬೆಂಗಳೂರಿನ ಜಯನಗರದ ಸಿದ್ದಾಪುರದ ಒಂದೇ ಕುಟುಂಬದ ಐದು ಮಕ್ಕಳೂ ಸೇರಿ 6 ಮಂದಿ ನಿಗೂಢ ರೀತಿಯಲ್ಲಿ ಬಾವಿಗೆ ಬಿದ್ದು ಸಾವಿಗೀಡಾದ್ದು, ಒಬ್ಬಳು ಮಹಿಳೆಯನ್ನು ಸ್ಥಳೀಯ ಸಾರ್ವಜನಿಕರು ರಕ್ಷಿಸಿರುವ ಘಟನೆ ಇಂದು ನಡೆದಿದೆ.

ರೇಷ್ಮಾ (25), ಜಯಖಾನಂ(12), ಆಲಿಷಾ (7), ಆಫ್ರೀನ್ ಫಾತೀಮಾ (8), ಫೈಜಾ (3), ಸಿಮ್ರಾನ್ ಖಾನ್ (12) ಎಂಬುವವರು ಮೃತಪಟ್ಟ ದುರ್ದೈವಿಗಳು. ರಶೀದಾ ಖಾನಂ ಅವರನ್ನು ಸಾರ್ವಜನಿಕರು ರಕ್ಷಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಅವರ ಶವಗಳನ್ನು ಹೊರಕ್ಕೆ ತೆಗೆಯಲಾಗಿದೆ. ಮುರುಗಮಲ್ಲ ದರ್ಗಾ ಚಿಂತಾಮಣಿಯಿಂದ 10 ಕಿಮೀ ದೂರದಲ್ಲಿದೆ. ಈ ಕುಟುಂಬ ಪೂಜೆಗೆಂದು ಬಂದು ಬಾವಿಗೆ ಬಿದ್ದು ಸಾವಿಗೀಡಾಗಿದ್ದಾರೆ ಎಂದು ಸ್ಥಳೀಯ ಸಂಶಯ ವ್ಯಕ್ತಪಡಿಸಿದ್ದಾರೆ. ಚಿಂತಾಮಣಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಮುರುಗಮಲ್ಲ ಬೆಟ್ಟ ಪ್ರಸಿದ್ಧ ಪ್ರವಾಸ ಕೇಂದ್ರವಾಗಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X