ಉಗ್ರರ ಹಸ್ತಾಂತರ ಖಂಡಿತ ಸಾಧ್ಯವಿಲ್ಲ, ಗಿಲಾನಿ
ಲಾಹೋರ್, ಡಿ. 15 : ಕಳೆದ ತಿಂಗಳು ಭಾರತದ ಮುಂಬೈನಲ್ಲಿ ಭಯೋತ್ಪಾದನೆ ಕೃತ್ಯಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ನಡೆಸುವ ಎಲ್ಲ ವಿಚಾರಣೆಗೆ ಪಾಕಿಸ್ತಾನ ಸೂಕ್ತವಾಗಿ ಸ್ಪಂದಿಸಲಿದೆ ಎಂದು ಪಾಕಿಸ್ತಾನದ ಪ್ರಧಾನಮಂತ್ರಿ ಯೂಸೆಫ್ ರಾಜಾ ಗಿಲಾನಿ ಸ್ಪಷ್ಪಪಡಿಸಿದ್ದಾರೆ. ವಿಶ್ವಸಂಸ್ಥೆ ಸೇರಿದಂತೆ ಅಂತಾರಾಷ್ಟ್ರೀಯ ಸಮೂಹ ಪಾಕಿಸ್ತಾನದ ಮೇಲೆ ಹೇರಿದ ತೀವ್ರಒತ್ತಡದಿಂದ ಪ್ರಧಾನಿ ಗಿಲಾನಿ ಈ ಪ್ರತಿಕ್ರಿಯೆ ನೀಡಿದ್ದಾರೆ.
ವಿಶ್ವಸಂಸ್ಥೆಯ ಸೂಚನೆ ಮೇರೆಗೆ ಭಯೋತ್ಪಾದನೆ ಸಂಘಟನೆಯೊಂದಿಗೆ ಸಂಪರ್ಕವಿರಿಸಿಕೊಂಡಿದ್ದ ಜಮಾತೆ ಆಲ್ ದವಾ ಸಂಘಟನೆಯನ್ನು ಈಗಾಗಲೇ ನಿಷೇಧಿಸಲಾಗಿದೆ. ಅಲ್ಲದೇ ಈಗಾಗಲೇ ಬಂಧಿಸಲಾಗಿರುವ ಲಷ್ಕರ್ ಇ ತೊಯ್ಬಾ ಸಂಘಟನೆ ಮುಖ್ಯಸ್ಥ ಹಫೀಜ್ ಮೊಹ್ಮದ್ ಸೇರಿ ನಾಲ್ಕು ಮಂದಿಯನ್ನು ಭಯೋತ್ಪಾದಕರೆಂದು ಪರಿಗಣಿಸಲಾಗಿದ್ದು, ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ಭಾರತದ ಒತ್ತಡಕ್ಕೆ ಮಣಿದಿಲ್ಲ ಎಂದಿರುವ ಅವರು, ವಿಶ್ವಸಂಸ್ಥೆಯ ಸಲಹೆಯನ್ನು ಅನುಸರಿಸುತ್ತಿರುವ ಪಾಕಿಸ್ತಾನ ಉಗ್ರರ ವಿರುದ್ಧ ಕಾರ್ಯಚರಣೆ ಆರಂಭಿಸಿದೆ. ಭಯೋತ್ಪಾದನೆ ಹತ್ತಿಕ್ಕುವಲ್ಲಿ ಪಾಕ್ ಮುಂದಿದೆ ಎನ್ನುವುದನ್ನು ನಾವು ಸಾಬೀತುಪಡಿಸಿದ್ದೇವೆ ಎಂದು ಪ್ರಧಾನಿ ಗಿಲಾನಿ ತಿಳಿಸಿದ್ದಾರೆ.
ಮುಂಬೈ ಭಯೋತ್ಪಾದನೆಯಲ್ಲಿ ಪಾಕಿಸ್ತಾನದ ಮೂಲದ ವ್ಯಕ್ತಿಗಳ ಕೈವಾಡವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಭಾರತ ಪೊಲೀಸರು ಪಾಕ್ ಮೂಲದ ವ್ಯಕ್ತಿಗಳು ಮುಂಬೈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಸಾಬೀತುಪಡಿಸಿದಲ್ಲಿ ಪಾಕಿಸ್ತಾನದ ಸಂವಿಧಾನದ ಪ್ರಕಾರ ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗುವುದು ಎಂದು ಗಿಲಾನಿ ಹೇಳಿದರು. ಆದರೆ ಸಿಕ್ಕಿಬಿದ್ದಿರುವ ಆರೋಪಿಗಳನ್ನು ಭಾರತಕ್ಕೆ ಹಸ್ತಾಂತರಿಸುವುದನ್ನು ಸಾರಾಸಗಟಾಗಿ ಅವರು ತಳ್ಳಹಾಕಿದರು.
(ಏಜೆಸ್ಸೀಸ್)
ಪೂರಕ
ಓದಿಗೆ:
ಮುಂಬೈ
ಭಯೋತ್ಪಾದನೆಗೆ
ಲಷ್ಕರ್
ಕಾರಣ
ಪುರೋಹಿತ್
ನನ್ನು
ನಮಗೆ
ಕೊಡಿ
:ಪಾಕ್
ಉಗ್ರ
ಕಸಬ್
ತಂದೆ
ಅಮೀರ್
ಸಂದರ್ಶನ