ಜಮಾತೆ ಉದ್ ದವಾಕ್ಕೆ ನಿಷೇಧ: ವಿಶ್ವಸಂಸ್ಥೆ
ವಿಶ್ವಸಂಸ್ಥೆ, ಡಿ. 11 : ವಿಶ್ವಸಂಸ್ಥೆಯ ಭದ್ರತಾ ಸಮಿತಿ ಲಷ್ಕರ್ ಇ ತೊಯ್ಬಾ ಸಂಘಟನೆಯ ಅಂಗ ಸಂಸ್ಥೆ ಜಮಾತೆ ಉದ್ ದವಾ ಸಂಘಟನೆಯ ನಿಷೇಧಿಸಕ್ಕೆ ಅಸ್ತು ಎಂದಿದೆ. ಅಲ್ಲದೆ, ಮುಂಬೈ ಭಯೋತ್ಪಾದನೆ ನೇರ ಕಾರಣನಾದ ಲಷ್ಕರ್ ಸಂಘಟನೆ ಮುಖ್ಯಸ್ಥ ಹಫೀಜ್ ಮೊಹ್ಮದ್ ಸಯೀದ್, ಝಾಕೀರ್ ಉರ್ ರೆಹೆಮಾನ್ ಲಖ್ವಿ, ಹಾಜಿ ಮೊಹ್ಮದ್ ಅಶ್ರಪ್ ಹಾಗೂ ಝಾಕಿ ಉರ್ ಬಹಾಜಕ್ ಅವರನ್ನು ವಿಶ್ವಸಂಸ್ಥೆಯ ಭದ್ರತಾ ಸಮಿತಿ ಭಯೋತ್ಪಾದಕರೆಂದು ಪರಿಗಣಿಸಿದೆ.
ಈ ನಾಲ್ಕು ಉಗ್ರರು ಹಾಗೂ ಜಮಾತೆ ಉದ್ ದವಾ ಸಂಘಟನೆಗೆ ಸೇರಿದೆ ಎಲ್ ಆಸ್ತಿ ಪಾಸ್ತಿಗಳನ್ನು ಸರ್ಕಾರ ಕೂಡಲೇ ವಶಕ್ಕೆ ತೆಗೆದುಕೊಳ್ಳಬೇಕು. ಮತ್ತು ಅವರಿಗೆ ಸಂಬಂಧಿಸಿದ ಬ್ಯಾಂಕ್ ಅಕೌಂಟ್ ಗಳನ್ನು ಕೂಡಾ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಭದ್ರತಾ ಸಮಿತಿ ತಿಳಿಸಿದೆ.
ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್ ಇ ತೊಯ್ಬಾದ ಬೆಂಬಲ ನೀಡುತ್ತದೆ ಎಂದು ಹೇಳಲಾದ ಜಮಾತೆ ಉಲ್ ದವಾ ಸಂಘಟನೆಯನ್ನು ನಿಷೇಧಿಸಲು ಸೂಚನೆ ನೀಡಿದಲ್ಲಿ ಅದರ ಚಿಂತನೆ ನಡೆಸಲಾಗುವುದು ಎಂದು ಪಾಕಿಸ್ತಾನ ಸ್ಪಷ್ಟಪಡಿಸಿತ್ತು. ಪಾಕಿಸ್ತಾನದ ವಿಶ್ವಸಂಸ್ಥೆಯ ವಕ್ತಾರ ಅಬ್ಧುಲ್ ಹುಸೇನ್ ಹರೂನ್ ಈ ವಿಷಯವನ್ನು ತಿಳಿಸಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಕಚೇರಿಗೆ ಭಾರತ ಸರ್ಕಾರವು ಪಾಕಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಮಾತೆ ಉದ್ ದವಾ ಸಂಘಟನೆಯನ್ನು ನಿಷೇಧಿಸಬೇಕು ಎಂದು ಮನವಿ ಮಾಡಿಕೊಂಡಿತ್ತು.
(ದಟ್ಸ್
ಕನ್ನಡ
ವಾರ್ತೆ)
ಜಮಾತೆ
ಉದ್
ದವಾ
ನಿಷೇಧಕ್ಕೆ
ಪಾಕ್
ಆಸಕ್ತಿ