ಕರವೇ ಎರಡು ಬಣಗಳ ನಡುವೆ ಕಾದಾಟ
ಬೆಂಗಳೂರು, ಡಿ. 11 : ಕನ್ನಡದ ಕಟ್ಟಾಳುಗಳಾದ ಟಿ ಎ ನಾರಾಯಣ ಗೌಡ ಮತ್ತು ಪ್ರವೀಣ್ ಶೆಟ್ಟಿ ಬಣಗಳ ನಡುವಿನ ಸಂಘರ್ಷಕ್ಕೆ ಪ್ರೆಸ್ ಕ್ಲಬ್ ಸಾಕ್ಷಿಯಾಯಿತು. ಮೊನ್ನೆಯಷ್ಟೆ ಹೈಕೋರ್ಟ್ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಬಣಕ್ಕೆ ಸೇರಿದ್ದು ಎಂದು ಆದೇಶ ನೀಡಿತ್ತು. ಈ ಸಂಬಂಧ ನಾರಾಯಣಗೌಡ ಅವರು ಪತ್ರಿಕಾಗೋಷ್ಠಿ ಕರೆದಿದ್ದ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದಿದೆ.
ನಾರಾಯಣಗೌಡ ಪತ್ರಿಕಾಗೋಷ್ಠಿ ಏರ್ಪಡಿಸಿರುವುದು ತಿಳಿದ ತಕ್ಷಣ ಪ್ರವೀಣ್ ಶೆಟ್ಟಿ ತಮ್ಮ ಕಾರ್ಯಕರ್ತರೊಂದಿಗೆ ಪ್ರೆಸ್ ಕ್ಲಬ್ ಗೆ ಧಾವಿಸಿ ನಮ್ಮದೇ ನಿಜವಾದ ಸಂಘಟನೆ ಎಂದು ಪ್ರತಿಭಟಿಸಲು ಶುರುಮಾಡಿದಾಗ ಎರಡು ಬಣಗಳ ನಡುವೆ ಮಾತಿನ ಚಕುಮಕಿ ನಡೆಯಿತು. ಗೊಂದಲದ ವಾತಾವರಣ ನಿರ್ಮಾಣವಾಗಿ ಪರಿಸ್ಥಿತಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದಾಗ ಸರಿಯಾದ ಸಮಯಕ್ಕೆ ಪೋಲಿಸ್ ಅಧಿಕಾರಿಗಳು ಬಂದು ಪ್ರವೀಣ್ ಶೆಟ್ಟಿ ಮತ್ತು ಅವರ ಹಿಂಬಾಲಕರನ್ನು ಕಬ್ಬನ್ ಪಾರ್ಕನೊಳಗೆ ಕಳುಹಿಸುವಲ್ಲಿ ಯಶಸ್ವಿಯಾದರು.
ಕಳೆದ ಡಿಸೆಂಬರ್ ನಲ್ಲಿ ಉಡುಪಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಗೋಷ್ಠಿಯೊ೦ದರಲ್ಲಿ ನಾರಾಯಣಗೌಡರಿಗೆ ಅವಕಾಶ ನೀಡಿದ್ದನ್ನು ಖಂಡಿಸಿ ಪ್ರವೀಣ್ ಶೆಟ್ಟಿ ಬಣ ಪ್ರತಿಭಟನೆ ನಡೆಸಿತ್ತಲ್ಲದೆ ಗೌಡರ ಬೆಂಬಲಿಗರ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.
(ದಟ್ಸ್
ಕನ್ನಡ
ವಾರ್ತೆ)
ಕರವೇ
ನಾರಾಯಣಗೌಡರಿಗೆ
ಸೇರಿದ್ದು