ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ:ಉಗ್ರರ ಒತ್ತೆಯಲ್ಲಿ 45 ಮಂದಿ

By Staff
|
Google Oneindia Kannada News

ಮುಂಬಯಿ, ನ.27: ಮುಂಬೈನ ತಾಜ್ ಹೋಟೆಲ್ ಬಳಿ ಉದ್ರಿಕ್ತ ಪರಿಸ್ಥಿತಿ ಇನ್ನೂ ಮುಂದುವರಿಯುತ್ತಿದೆ. ತಾಜ್ ಹೋಟೆಲ್ ನ 19ನೇ ಅಂತಸ್ತಿನಲ್ಲಿ ಅವಿತಿರುವ ಉಗ್ರರು ಹಾಗೂ ಸೈನಿಕರ ನಡುವೆ ದಾಳಿ ಮುಂದುವರೆದಿದೆ.

ಉಗ್ರವಾದಿಗಳ ಒತ್ತೆಯಲ್ಲಿದ್ದ 100 ಮಂದಿಯನ್ನು ಸೈನಿಕರು ರಕ್ಷಿಸಿದ್ದಾರೆ. ಇವರಲ್ಲಿ ಒಬ್ಬ ಫ್ರೆಂಚ್ ವಿಜ್ಞಾನಿ ಹಾಗೂ ಅವರ ಪತ್ನಿ ಸಹ ಸೇರಿದ್ದು, ಇವರು ಭಾರತೀಯ ಅಣು ಸೊಸೈಟಿ ಪ್ರಕಟಿಸಿದ್ದ ಪ್ರಶಸ್ತಿಯನ್ನು ಸ್ವೀಕರಿಸಲು ಮುಂಬೈಗೆ ಆಗಮಿಸಿದ್ದರು.

ಸಿಪಿಎಂ ನ ಸಂಸದ ಕೃಷ್ಣನ್ ದಾಸ್ ಅವರನ್ನು ಉಗ್ರರ ಸೆರೆಯಿಂದ ರಕ್ಷಿಸಲಾಗಿದೆ. ಮೃತಪಟ್ಟವರಲ್ಲಿ ಅಮೆರಿಕನ್ ಗುಪ್ತಚರ ಇಲಾಖೆಯ ಇಬ್ಬರು ಅಧಿಕಾರಿಗಳು ಇದ್ದಾರೆ.ಟ್ರೈಡೆಂಟ್ ಹೋಟೆಲ್ ನಲ್ಲಿ ಇನ್ನೂ ಸುಮಾರು 45 ಮಂದಿ ಉಗ್ರರ ಒತ್ತೆಯಲ್ಲಿದ್ದು ರಕ್ಷಣಾ ಕಾರ್ಯ ಮುಂದುವರಿದಿದೆ.
(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X