ಮುಂಬೈ ಉಗ್ರರದಾಳಿ; ಪಾಕಿಗಳ ಕೈವಾಡ
ಮುಂಬೈ, ನ. 27 : ಮುಂಬೈಯಲ್ಲಿ ನಡೆದ ಉಗ್ರರ ವಿಧ್ವಂಸಕ ಕೃತ್ಯದಲ್ಲಿ ಪಾಕಿಸ್ತಾನಿ ಪ್ರಜೆಗಳ ಕೈವಾಡವಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಉಗ್ರರು ಈ ಕೃತ್ಯ ನಡೆಸಲು ಅನೇಕ ದಿನಗಳಿಂದ ಸಂಚು ರೂಪಿಸಿದ್ದಾರೆ. ಪಾಕಿಸ್ತಾನದಿಂದ ಬೋಟ್ (ದೋಣಿ) ಮೂಲಕ ಭಾರತದೊಳಕ್ಕೆ ನುಸುಳಿ ಮುಂಬೈಯಲ್ಲಿ ವಾಸವಿದ್ದು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೃತ್ಯಕ್ಕೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವ ಆರ್ ಆರ್ ಪಾಟೀಲ್ ಪ್ರಕಾರ, ಪಾಕಿಸ್ತಾನ ಮೂಲದ ವ್ಯಕ್ತಿಗಳು ಈ ಸಂಚು ರೂಪಿಸಿದ್ದಾರೆ ಎಂದು ಪ್ರಾಥಮಿಕ ವರದಿಯಿಂದ ಗೊತ್ತಾಗಿದೆ. ತನಿಖೆ ಆರಂಭವಾಗಿದೆ. ಈ ಬಗ್ಗೆ ಸಾಕಷ್ಟು ವರದಿಗೆ ನಿರೀಕ್ಷಿಸಲಾಗುತ್ತದೆ. ಸಮಗ್ರ ವರದಿ ಬಂದ ನಂತರವಷ್ಟೆ ಈ ಬಗ್ಗೆ ಎಲ್ಲ ವಿವರಗಳು ಲಭ್ಯವಾಗಲಿವೆ ಎಂದು ತಿಳಿಸಿದ್ದಾರೆ. ಉಗ್ರರು ಪಾಕಿಸ್ತಾನದಿಂದ ಬೋಟ್ ಮೂಲಕ ಮುಂಬೈ ನಗರದೊಳಗೆ ಸೇರಿಕೊಂಡಿದ್ದಾರೆ ಎಂದು ಕೋಲಾಬ ಪೊಲೀಸರು ತಿಳಿಸಿದ್ದಾರೆ.
ಮಹಾರಾಷ್ಟ್ರ
ಪೊಲೀಸರು
ಹಾಗೂ
ಭಾರತೀಯ
ಸೇನಾಪಡೆಯ
ತುಕಡಿಗಳು
ಮುಂಬೈ
ನಗರವನ್ನು
ಸುತ್ತುವರೆದಿದ್ದು,
ಉಗ್ರರು
ತಪ್ಪಿಸಿಕೊಳ್ಳದಂತೆ
ಕಟ್ಟೆಚ್ಚರ
ವಹಿಸಿದ್ದಾರೆ.
ಮುಂಬೈನಿಂದ
ಹೊರಗೆ
ಹೋಗುವ
ಹಾಗೂ
ಒಳಗೆ
ಬರುವ
ಎಲ್ಲ
ವಾಹನಗಳನ್ನು
ತಪಾಸಣೆ
ನಡೆಸಿದ್ದಾರೆ.
ಪಾಕಿಸ್ತಾನ
ಮೂಲದ
ಲಷ್ಕರ್-ಈ-ತೊಯ್ಬಾ
ಸಂಘಟನೆಗಳ
ಸೇರಿದ
ವ್ಯಕ್ತಿಗಳು
ಇರಬಹುದು
ಎಂದು
ಶಂಕಿಸಲಾಗಿದೆ.
(ದಟ್ಸ್
ಕನ್ನಡ
ವಾರ್ತೆ)