ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ ಹುತಾತ್ಮರಿಗೆ ಕನ್ನಡಾಂಜಲಿ

By Staff
|
Google Oneindia Kannada News

we salute to ats martyrs
ಮುಂಬೈ, ನ. 27 : ಇತ್ತೀಚಿನ ವರದಿಗಳು ಬಂದಾಗ ಮುಂಬೈ ಹತ್ಯಾಕಾಂಡದಲ್ಲಿ ಒಟ್ಟು 101 ಮಂದಿ ಸಾವನ್ನಪ್ಪಿದ್ದಾರೆ. 200 ಕ್ಕೂ ಹೆಚ್ಚು ಮಂದಿ ಗಾಯಗೊಂಡು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಗ್ರಗಾಮಿಗಳ ಕೋವಿಗೆ ತುತ್ತಾಗಿ ಅಸುನೀಗಿದ ಅನಾಮಿಕರಿಗೆ ದಟ್ಸ್ ಕನ್ನಡ ಶ್ರದ್ಧಾಂಜಲಿ ಅರ್ಪಿಸುತ್ತದೆ. ಮತ್ತು ತಮ್ಮ ಸಮೀಪದ ಬಂಧು ಮಿತ್ರರನ್ನು ಕಳೆದುಕೊಂಡ ನೋವನ್ನು ಭರಿಸುವ ಶಕ್ತಿ ಕುಟುಂಬ ವರ್ಗಕ್ಕೆ ಪ್ರಾಪ್ತವಾಗಲಿ ಎಂದು ಹಾರೈಸುತ್ತದೆ.

ಉಗ್ರಗಾಮಿಗಳ ಹುಟ್ಟಡಗಿಸಲು ಸೆಡ್ಡು ಹೊಡೆದು ನಿಂತು ಹೋರಾಡುವ ನಮ್ಮ ಭದ್ರತಾ ಸಿಬ್ಬಂದಿಯ ಧೈರ್ಯ ಮತ್ತು ಸಾಹಸಗಳನ್ನು ದಟ್ಸ್ ಕನ್ನಡ ಕೊಂಡಾಡುತ್ತದೆ. ಮುಖ್ಯವಾಗಿ ಉಗ್ರಗಾಮಿ ನಿಗ್ರಹ ಪಡೆಯ ಮಂಚೂಣಿಯಲ್ಲಿ ನಿಂತು ತಮ್ಮ ಪ್ರಾಣವನ್ನೇ ತ್ಯಾಗಮಾಡಿದ ಹುತಾತ್ಮರ ಆತ್ಮಕ್ಕೆ ಶಾಂತಿ ಕೋರುತ್ತದೆ. ಇಂಥ ಘಟನೆಗಳಲ್ಲಿ ಪ್ರಾಣಾರ್ಪಣೆ ಮಾಡುವವರ ನೆನಪು 24 ಗಂಟೆಗಳಲ್ಲಿ ಮರೆತು ಹೋಗುವುದು ಸಾಮಾನ್ಯ. ಎಂದೂ ಹಾಗಾಗದಿರಲಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X