ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಫೋಟದಲ್ಲಿ ಡೆಕ್ಕನ್ ಮುಜಾಹಿದ್ದೀನ್ ಕೈವಾಡ

By Staff
|
Google Oneindia Kannada News

ಮುಂಬೈ, ನ. 27 : ಬುಧವಾರ ರಾತ್ರಿ ವಾಣಿಜ್ಯ ನಗರಿಯಲ್ಲಿ ನಡೆದ ಭಯೋತ್ಪಾದಕ ಕೃತ್ಯವನ್ನು ಡೆಕ್ಕನ್ ಮುಜಾಹಿದ್ದೀನ್ ಎನ್ನುವ ಉಗ್ರ ಸಂಘಟನೆ ಹೊಣೆಹೊತ್ತಿದೆ. ತಾಜ್ ಹೋಟೆಲ್ ನಲ್ಲಿ ಉಗ್ರರೊಂದಿಗೆ ರಾಷ್ಟ್ರೀಯ ಭದ್ರತಾ ಪಡೆ ಕಮಾಂಡೋಗಳ ಎನ್ ಕೌಂಟರ್ ಮುಂದುವರೆದಿದೆ. ಉಗ್ರರ ಒತ್ತೆಯಾಳುಗಳಲ್ಲಿ ವಿದೇಶಿಯರು ಸೇರಿದ್ದಾರೆ. ಒಟ್ಟು ಈವರೆಗೂ 102 ಮೃತಪಟ್ಟಿದ್ದು, 287 ಮಂದಿ ಗಾಯಗೊಂಡಿದ್ದಾರೆ.

ಉಗ್ರರು ಯುವಕರಾಗಿದ್ದು ಕಪ್ಪು ಟಿ- ಶರ್ಟ್, ಜೀನ್ಸ್ ಮತ್ತು ನೀಲಿ ಬಣ್ಣದ ಬೆನ್ನ ಚೀಲ ಹೊಂದಿದ್ದಾರೆ. ಬಲ ಕೈಗೆ ಕೆಂಪು ದಾರ ಕಟ್ಟಿಕೊಂಡಿದ್ದ ಇವರು ಕಾಲೇಜ್ ಗೆ ಹೋಗುವ ಯುವಕರಂತೆ ಕಾಣಿಸುತ್ತಿದ್ದರು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಕೈಗೆ ಕೆಂಪು ದಾರ ಕಟ್ಟಿಕೊಂಡಿದ್ದರಿ೦ದ ಇದು ಹಿಂದೂ ತೀವ್ರವಾದಿಗಳ ಕೈವಾಡ ಇರಬಹುದು ಎನ್ನುವ ಅನುಮಾನ ಭದ್ರತಾ ಪಡೆ ಶಂಕಿಸಿದೆ. ಆದರೆ ಕೃತ್ಯದ ಹೊಣೆಯನ್ನು ಮುಸ್ಲಿಂ ಹೆಸರಿನ ಸಂಘಟನೆ ವಹಿಸಿಕೊಂಡಿರುವುದು ತಲೆನೋವಾಗಿ ಪರಿಣಮಿಸಿದೆ.

ಭಯೋತ್ಪಾದನಾ ಕೃತ್ಯದಿಂದ ಮುಂಬೈ ಸಂಪೂರ್ಣ ತತ್ತರಿಸಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕೆಲ ವಿಮಾನ ಸಂಚಾರವನ್ನು ರದ್ದುಗೊಳಿಸಲಾಗಿದೆ. ರಸ್ತೆ ಸಂಚಾರ ರಾತ್ರಿಯಿಂದಲೇ ಸ್ತಬ್ಧಗೊಂಡಿದೆ. ಮುಂಬೈ ಷೇರು ಪೇಟೆ ಸ್ಥಗಿತಗೊಂಡಿದೆ. ಈ ಘಟನೆಯನ್ನು ಪ್ರತಿಪಕ್ಷದ ನಾಯಕ ಎಲ್ ಕೆ ಅಡ್ವಾಣಿ ತೀವ್ರವಾಗಿ ಖಂಡಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X