ಕಟಕ್ ನಲ್ಲೂ ಧೋನಿಗೇ ಬಹುಮಾನ?
ಕಟಕ್ ( ಒರಿಸ್ಸಾ), ನ. 26 : ಒಂದು ದಿನದ ಏಳು ಪಂದ್ಯಗಳ ಪೈಕಿ ನಾಲಕ್ಕು ಪಂದ್ಯಗಳನ್ನು ಬುಟ್ಟಿಗೆ ಹಾಕಿಕೊಂಡು ಬೀಗುತ್ತಿರುವ ಭಾರತ ತಂಡ ಇಂದು ಇಲ್ಲಿ ಆಡುವ ಪಂದ್ಯದಲ್ಲಿ ಹೇಗೆ ಆಡತ್ತೋ ಗೊತ್ತಿಲ್ಲ. ಅಂತೂ ಕಳೆದ ಎರಡು ತಿಂಗಳ ಅವಧಿಯಲ್ಲಿ ಧೋನಿ ಬಳಗದ ಫಾರಂ ನೋಡಿರುವ ಪಂಡಿತರು ಕಟಕ್ ನಲ್ಲಿ ಭಾರತ ಇಂಗ್ಲೆಂಡ್ ತಂಡವನ್ನು ಮತ್ತೆ ಬಗ್ಗುಬಡಿಯುವುದೆಂಬ ಲೆಕ್ಕಾಚಾರ ಹಾಕುತ್ತಿದ್ದಾರೆ. ಉದಾಹರಣೆಗೆ India set to drub England 5-0 in Cuttack
ಇನ್ನೇನು ಸರಣಿ ಗೆದ್ದಾಗಿದೆ, ಈಗ ತಂಡದಲ್ಲಿ ಕೆಲವು ಬದಲಾವಣೆಗಳನ್ನು ತಂದು ಪ್ರಯೋಗ ಮಾಡುವ ಇರಾದೆ ಧೋನಿ ಅವರಿಗೆ ಇದೆ. ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ, ಬೌಲಿಂಗ್ ವಿಭಾಗದಲ್ಲಿ ಹೊಸ ಚಮತ್ಕಾರಗಳ ಪ್ರಯೋಗ ಮುಂತಾದ ಆಲೋಚನೆಗಳು ಧೋನಿ ಮಿದುಳಿನಲ್ಲಿ ಸುಳಿದಾಡುತ್ತಿವೆ ಎಂದು ವರದಿಗಳು ಹೇಳುತ್ತಿವೆ. ವಿರಾಟ್ ಕೊಹ್ಲಿ ಮತ್ತು ಇರ್ಫಾನ್ ಪಠಾಣೆ ಅವರುಗಳಿಗೆ ಇವತ್ತು ಅವಕಾಶ ದೊರೆಯುವ ಸಾಧ್ಯತೆ ಇದೆ.
ಧೋನಿ ಹೀಗೆ ಮಾಡುವುದಕ್ಕೆ ಮತ್ತು ಪಂಡಿತರು ಭಾರತ ಈ ಪಂದ್ಯದಲ್ಲೂ ಗೆದ್ದೇ ತೀರುತ್ತದೆ ಎಂದು ಹೇಳುತ್ತಿರುವುದಕ್ಕೆ ಪಿಯಟರ್ ಸನ್ ತಂಡ ಆಡುತ್ತಿರುವ ವೈಖರಿಯೇ ಸಾಕ್ಷಿ. ತುಂಬ ಕೆಟ್ಟದಾಗಿ ಆಡುತ್ತಿದ್ದಾರೆ, ಈ ತಂಡಕ್ಕೆ ಛಲವೆನ್ನುವುದೇ ಇಲ್ಲ ಎಂದು ಇಂಗ್ಲೆಂಡಿನ ಮಾಧ್ಯಮಗಳು ಬೇಜಾನ್ ಟೀಕೆ ಮಾಡಿವೆ. Telegraph ಮತ್ತು BBC ಚಾನಲ್ಲಿನ ವಿಶ್ಲೇಷಕರ ಪ್ರಕಾರ ಇಂಗ್ಲೆಂಡ್ ತಂಡಕ್ಕೆ white wash ಖಂಡಿತ!
ಏರಿದವನು ಮುಗ್ಗರಿಸಿ ಬೀಳುತ್ತಾನೆ ಎಂಬ ಗಾದೆ ಮಾತಿದೆ. ಭಾರತ ತಂಡ ಕೊಬ್ಬು ಕೊಬ್ಬಾಗಿ ಆಡಿ ಎಡವಿದರೆ ಮನೆ ಬಾಗಿಲಿಗೆ ಬಂದ ಅದೃಷ್ಟ ಲಕ್ಷ್ಮಿಯನ್ನು ಎಡಗಾಲಿನಿಂದ ಹೊಡೆದ ಹಾಗೆ ಆಗುತ್ತದೆ. ಈಗಾಗಲೆ ಗೆದ್ದಿದ್ದನ್ನು ಮರೆತು, ಮತ್ತೆ ಗೆಲ್ಲುವ ಛಲದಿಂದ ಆಟ ಆಡಿದರೆ ಕ್ಷೇಮ ಎನ್ನುತ್ತಾರೆ ಅಭಿಮಾನಿಗಳು.
ಇದೀಗ ಕಟಕ್ನಲ್ಲಿ ಆಟ ಆರಂಭವಾಗಿದೆ. ಭಾರತ ಟಾಸ್ ಗೆದ್ದು ಇಂಗ್ಲೆಂಡಿಗೆ ಬ್ಯಾಟ್ ಮಾಡಲು ಕಳಿಸಿದೆ. ಈ ಪಂದ್ಯ ಎತ್ತ ಸಾಗುತ್ತದೆ ಎನ್ನುವುದರ ಕ್ಷಣ ಕ್ಷಣ ವರದಿ ತಿಳಿಯಲು ನೀವೂ ಪ್ಯಾಡ್ ಕಟ್ಟಿಕೊಳ್ಳಿರಿ !