ಮೈತ್ರಿ ಕುದುರಿಸಲು ಬಂಗಾರಪ್ಪ ನೇತೃತ್ವ
ಬೆಂಗಳೂರು, ನ. 26 : ಕೋಮುವಾದಿ ಬಿಜೆಪಿಯನ್ನು ಸೋಲಿಸುವ ಸಲುವಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಕುರಿತು ಕಾಂಗ್ರೆಸ್ ಹೈಕಮಾಂಡ್ ಜತೆಗೆ ಚರ್ಚಿಸಲು ಸಮಾಜವಾದಿ ಪಕ್ಷದ ಮುಖಂಡ ಎಸ್ ಬಂಗಾರಪ್ಪ ಮುಂದಾಗಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಆಂತರಿಕವಾಗಿ ಕೂಡಿಕೊಳ್ಳುವ ಮನಸ್ಸಿದ್ದರೂ ಬಹಿರಂಗವಾಗಿ ಕೆಲ ತಾಂತ್ರಿಕ ತೊಂದರೆಗಳು ಎದುರಾಗಿವೆ. ಈ ಹಿನ್ನೆಲೆಯಲ್ಲಿ ಮೈತ್ರಿಗೆ ಅಡ್ಡಿಯಾಗಿವೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಇಂದು ಕಾಂಗ್ರೆಸ್ ಕಾರ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಆರ್ ವಿ ದೇಶಪಾಂಡೆ ಅವರೊಂದಿಗೆ ಮಾತುಕತೆ ನಡೆಸಲು ತೀರ್ಮಾನಿಸಿದ್ದಾರೆ. ಈಗಾಗಲೇ ಅವರಿಬ್ಬರ ಜತೆಗೆ ದೂರವಾಣಿ ಮೂಲಕ ಪ್ರಸ್ತಾವಿಕವಾಗಿ ಚರ್ಚಿಸಿದ್ದಾರೆ. ಇದೆಲ್ಲದರ ನಡುವೆ ಮೈತ್ರಿಗೆ ದೊಡ್ಡ ತಲೆನೋವಾಗಿರುವ ಸಿದ್ದರಾಮಯ್ಯ, ಮೈತ್ರಿ ಮಾತಿಗೆ ತೆರೆ ಬಿದ್ದ ಮೇಲೆ ತಮ್ಮ ಪ್ರತಿಕ್ರಿಯೆ ನೀಡುವುದಾಗಿ ಹೇಳಿದ್ದಾರೆ.
ಕಾಂಗ್ರೆಸ್-ಜೆಡಿಎಸ್
ಮೈತ್ರಿ
ಕುದುರಿಸಲು
ಮುಂದಾಗಿರುವ
ಬಂಗಾರಪ್ಪ
ಅವರಿಗೆ
ಸಿದ್ದು
ಸಮಾಧಾನ
ಮಾಡಿ
ಬಿಜೆಪಿಯನ್ನು
ಹೇಗೆ
ಸೆದೆಬಡಿಯುತ್ತಾರೆ
ಎಂಬುದು
ಕುತೂಹಲದ
ಸಂಗತಿಯಾಗಿದೆ.
ಕಳೆದ
ವಿಧಾನಸಭೆ
ಚುನಾವಣೆಯಲ್ಲಿ
ಯಡಿಯೂರಪ್ಪ
ವಿರುದ್ಧ
ಶಿಕಾರಿಪುರದಲ್ಲಿ
ಬಂಗಾರಪ್ಪ
ಸ್ಪರ್ಧಿಸಿದ್ದಾಗ
ಕಾಂಗ್ರೆಸ್,
ಜೆಡಿಎಸ್
ಪಕ್ಷಗಳು
ತಮ್ಮ
ಅಭ್ಯರ್ಥಿಗಳನ್ನು
ಕಣಕ್ಕಿಳಿಸಿರಲಿಲ್ಲ
ಎಂಬುದನ್ನು
ನೆನೆಯಬಹುದು.
(ದಟ್ಸ್
ಕನ್ನಡ
ವಾರ್ತೆ)