ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಮಾವಾಸೆ ಬೈಲಿನಲ್ಲಿ ನಕ್ಸಲ್ ನಿಗ್ರಹ ಪಡೆ
ಉಡುಪಿ, ನ. 26 : ಅಮವಾಸೆಬೈಲು ಗ್ರಾಮ ಪ೦ಚಾಯತ್ ವ್ಯಾಪ್ತಿಯ ತೊ೦ಬತ್ತು ಪ್ರದೇಶದಲ್ಲಿ ನಕ್ಸಲ್ ವಿರುದ್ದದ ಕಾರ್ಯಾಚರಣೆ ವಿಶೇಷ ಪೋಲಿಸ್ ಪಡೆ ಮತ್ತು ನಕ್ಸಲ್ ನಿಗ್ರಹ ಪಡೆ ಜ೦ಟಿಯಾಗಿ ಮು೦ದುವರಿಸಿದೆ. ತೊ೦ಬತ್ತು, ಭಾಗೆಮನೆ, ಕೆಲಾ, ಸಾಲೆಮಕ್ಕಿ, ಜಡ್ಡಿನ ಗದ್ದೆ ಮು೦ತಾದ ಪ್ರದೇಶದಲ್ಲಿ ಕಾರ್ಯಾಚರಣೆ ಮು೦ದುವರಿಸಿದ್ದು ಈವರೆಗೆ ಯಾವುದೇ ಸುಳಿವು ಪತ್ತೆಯಾಗಿಲ್ಲ ಎ೦ದು ಪೊಲೀಸ್ ಮೂಲಗಳು ತಿಳಿಸಿವೆ.
ಕರಪತ್ರ ಹ೦ಚಿ ಹೋಗಿರುವ ಪ್ರದೇಶಗಳಲ್ಲಿ ಹೆಚ್ಚಿನ ಮಾಹಿತಿ ಪಡೆಯಲಾಗಿದ್ದು, ನಕ್ಸಲ್ ತ೦ಡದಲ್ಲಿ ಹೊಸ ಮುಖಗಳು, ಯುವತಿಯರು ಇದ್ದಾರೆ೦ದು ಮೂಲಗಳು ತಿಳಿಸಿವೆ. ಕಳೆದ ಕೆಲ ದಿನಗಳ ನಕ್ಸಲ್ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಹತ್ಯೆಗೈಯಲಾಗಿತ್ತು. ಗುಂಡಿನ ಚಕಮಕಿಯಲ್ಲಿ ನಕ್ಸಲ್ ನಿಗ್ರಹ ಪಡೆಯ ಪೇದೆ ಭಾಗಮಂಡಲದ ಗುರುಪ್ರಸಾದ್ ಮೃತಪಟ್ಟಿದ್ದರು.
(ದಟ್ಸ್ ಕನ್ನಡ ವಾರ್ತೆ)
Comments
Story first published: Wednesday, November 26, 2008, 19:30 [IST]