ರಾಜ್ಯ ಚುನಾವಣೆ ಆಯೋಗ ಎಚ್ಚರಿಕೆ
ಬೆಂಗಳೂರು, ನ. 24 : ಕೇಂದ್ರ ಚುನಾವಣಾ ಆಯೋಗ ಉಪಚುನಾವಣೆ ದಿನಾಂಕ ಘೋಷಣೆಯಾಗಿರುವ ಬೆನ್ನಲ್ಲೇ ರಾಜ್ಯ ಚುನಾವಣಾ ಆಯೋಗ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡುವವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಜ್ಯ ಚುನಾವಣಾ ಅಯೋಗದ ಮುಖ್ಯ ಆಯುಕ್ತ ಎಂ ಎನ್ ವಿದ್ಯಾಶಂಕರ್, ಕೇಂದ್ರ ಚುನಾವಣೆ ಆಯೋಗ ಉಪಚುನಾವಣೆಯ ದಿನಾಂಕ ಪ್ರಕಟಿಸುವುದರ ಜತೆಗೆ ಚುನಾವಣಾ ನೀತಿ ಸಂಹಿತೆಯನ್ನೂ ಜಾರಿಗೊಳಿಸಿದೆ. ಈ ಹಿನ್ನೆಲೆಯಲ್ಲಿ ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ಸೇರಿದಂತೆ ಸಂಪುಟದ ಸಚಿವರು ಹೊಸ ಯೋಜನೆಗಳು ಘೋಷಣೆ ಹಾಗೂ ವರ್ಗಾವಣೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ನೀತಿ ಸಂಹಿತೆ ಉಲ್ಲಂಘಿಸಿದಲ್ಲಿ ಅಂತವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಎಂಟು
ವಿಧಾನಸಭೆ
ಉಪಚುನಾವಣೆ
ನಡೆಯುವ
ಜಿಲ್ಲಾಧಿಕಾರಿಗಳೊಂದಿಗೆ
ಶೀಘ್ರದಲ್ಲಿ
ಸಭೆ
ನಡೆಸಲಾಗುವುದು
ಎಂದ
ವಿದ್ಯಾಶಂಕರ್,
ಆಯೋಗ
ಚುನಾವಣೆ
ಎದುರಿಸಲು
ಸರ್ವಸನ್ನದ್ಧವಾಗಿದೆ
ಎಂದರು.
ಅಕ್ರಮಗಳನ್ನು
ತಡೆಯಲು
ವಿಶೇಷ
ಕಾರ್ಯಸೂಚಿಯನ್ನು
ತಯಾರಿಸಲಾಗುವುದು.
ಕಳೆದ
ವಿಧಾನಸಭೆಯಷ್ಟೇ
ಪಾರದರ್ಶಕವಾಗಿ
ಉಪಚುನಾವಣೆಯನ್ನು
ನಡೆಸಲಾಗುವುದು
ಎಂದು
ವಿದ್ಯಾಶಂಕರ್
ಹೇಳಿದರು.
(
ದಟ್ಸ್
ಕನ್ನಡ
ವಾರ್ತೆ)