ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರಣಿ ಸ್ಫೋಟ:ತೂಗಾಡಿಯಾ ಮೇಲೆ ಶಂಕೆ?

By Staff
|
Google Oneindia Kannada News

ಮುಂಬೈ, ನ. 24 : ಮಾಲೇಗಾಂವ್ ಸ್ಫೋಟ ಘಟನೆ ಸಂಘ ಪರಿವಾರದ ಬಲ ಕುಗ್ಗುವಂತೆ ಮಾಡಿದೆ ಎಂದರ ತಪ್ಪಲ್ಲ. ದಿನದಿಂದ ದಿನಕ್ಕೆ ಪರಿವಾರ ಮುಖಂಡರ ಹೆಸರುಗಳು ಈ ಸ್ಫೋಟದ ಕೃತ್ಯದಲ್ಲಿ ಕೇಳಿ ಬರುತ್ತಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದೆ. ಶನಿವಾರ ಆರ್ಎಸ್ಎಸ್ ಮುಖಂಡ ಶ್ಯಾಮ್ ಅಪ್ಟೆ ಅವರನ್ನು ವಿಚಾರಣೆ ನಡೆಸಿದ ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ಪಡೆ ಕೃತ್ಯದಲ್ಲಿ ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಅಧ್ಯಕ್ಷ ಪ್ರವೀಣ ತೂಗಾಡಿಯಾ ಅವರ ಕೈವಾಡವಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದೆ ಎನ್ನಲಾಗಿದೆ.

ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳದ ಪ್ರಕಾರ, ಸೆಪ್ಟೆಂಬರ್ 29 ರಂದು ನಡೆದ ಮಾಲೇಗಾಂವ್ ಸರಣಿ ಸ್ಫೋಟ ಪ್ರಕರಣದಲ್ಲಿ ವಿಎಚ್ ಪಿ ಮುಖಂಡ ಪ್ರವೀಣ್ ತೊಗಾಡಿಯಾ ಅವರ ಕೈವಾಡವಿರುವ ಬಗ್ಗೆ ಮಾಹಿತಿಗಳು ಲಭ್ಯವಾಗತೊಡಗಿವೆ. ತೊಗಾಡಿಯಾ ಅವರ ಕೈವಾಡವಿರದಿದ್ದರೂ ಕೂಡಾ ಸ್ಫೋಟದ ಬಗ್ಗೆ ಅವರಿಗೆ ಮೊದಲೆ ತಿಳಿದಿತ್ತು ಎನ್ನುವ ಹೇಳಿಕೆಯನ್ನು ನೀಡಿದೆ. ಅದರೆ ಅವರಿಂದ ಸ್ಫೋಟಕ್ಕೆ ಹಣ ಬಂದಿದೆ ಎನ್ನುವುದು ತನಿಖೆಯಿಂದ ತಿಳಿದು ಬರಬೇಕಿದೆ. ಈ ಬಗ್ಗೆ ತನಿಖೆಯನ್ನು ತೀವ್ರಗೊಳಿಸಲಾಗಿದೆ ಎಂದು ಮಹಾರಾಷ್ಟ್ರ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ತಿಳಿಸಿದ್ದಾರೆ.

ಮಹಾರಾಷ್ಟ್ರ ಎಟಿಎಸ್ ಮಾಡಿರುವ ಗಂಭೀರ ಆರೋಪವನ್ನು ಪ್ರವೀಣ್ ತೂಗಾಡಿಯಾ ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಪ್ರಗ್ಯಾಸಿಂಗ್ ಠಾಕೂರ್, ದಯಾನಂದ ಪಾಂಡೆ ಹಾಗೂ ಕರ್ನಲ್ ಪ್ರಸಾದ ಶ್ರೀಕಾಂತ್ ಪುರೋಹಿತ್ ಅವರನ್ನು ಜೈಲಿಗೆ ಕಳಿಸಿರುವ ಎಟಿಎಸ್ ಪೊಲೀಸರು ವಿಎಚ್ ಪಿ ಮುಖಂಡ ಪ್ರವೀಣ್ ತೊಗಾಡಿಯಾ ಕಣ್ಣಿಟ್ಟಿರುವುದು ಸಂಘ ಪರಿವಾರಕ್ಕೆ ಭಾರಿ ಹೊಡೆತ ಎನ್ನಲಾಗಿದೆ. ಬಿಜೆಪಿ ಪಕ್ಷ ಇದನ್ನು ಸ್ಪಷ್ಟವಾಗಿ ನಿರಾಕರಿಸಿದ್ದು, ಮಾಲೇಗಾಂವ್ ಸ್ಫೋಟವನ್ನು ಸಂಪೂರ್ಣ ರಾಜಕೀಯಗೊಳಿಸಲಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದೆ.
(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X