ಬಿಜೆಪಿಗೆ ಗೆಲುವು ಖಚಿತ, ಯಡಿಯೂರಪ್ಪ
ಬೆಂಗಳೂರು, ನ. 24 : ಡಿ. 27 ರಂದು ನಡೆಯಲಿರುವ ಎಂಟೂ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಆತ್ಮವಿಶ್ವಾಸದಿಂದ ಹೇಳಿದರು.
ನಗರದ ಹೋಟೆಲ್ ವೊಂದರಲ್ಲಿ ಏರ್ಪಡಿಸಲಾಗಿರುವ ಎರಡು ದಿನಗಳ ಬಿಜೆಪಿ ಚಿಂತನ ಮಂಥನ ಕಾರ್ಯಕ್ರಮದ ನೇತೃತ್ವ ವಹಿಸಿ ಚರ್ಚೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಎಲ್ಲ ಬಿಜೆಪಿ ಶಾಸಕರ ಜತೆಗೆ ಚರ್ಚೆ ನಡೆಸಿ ಇನ್ನೆರಡು ದಿನಗಳಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದರು.
ಬಿಜೆಪಿ ಪಕ್ಷ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಲು ಮುಖ್ಯ ಕಾರಣರಾಗಿರುವ ಪಕ್ಷೇತರ ಶಾಸಕರನ್ನು ಸಂಪುಟದಿಂದ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ ಯಡಿಯೂರಪ್ಪ, ತಾಂತ್ರಿಕ ಕಾರಣಗಳಿಂಗ ಹೊರಗಿರುವ ಪಕ್ಷೇತರ ಶಾಸಕರನ್ನು ಕೂಡಾ ಬಿಜೆಪಿ ಶಾಸಕರಷ್ಟೇ ಆಧ್ಯತೆ ನೀಡಲಾಗುವುದು ಎಂದು ಹೇಳಿದರು. ಮುಖ್ಯವಾಗಿ ಸದ್ಯ ಚುನಾವಣೆ ನಡೆಯಲಿರುವ ಕ್ಷೇತ್ರಗಳಲ್ಲಿ ಬಿಜೆಪಿ ಸ್ಥಿತಿಗತಿ ಹಾಗೂ ಆ ಪ್ರದೇಶದಲ್ಲಿ ಈ ವರೆಗೂ ಆಗಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.
ತುರುವೇಕೆರೆ
ಕ್ಷೇತ್ರದಿಂದ
ಜಗ್ಗೇಶ್
ರನ್ನು
ಹೊರತುಪಡಿಸಿ
ಆಪರೇಷನ್
ಕಮಲದ
ಮೂಲಕ
ಬಿಜೆಪಿ
ಸೇರ್ಪಡೆಯಾಗಿರುವವವರು
ಬಿಜೆಪಿ
ಪಕ್ಷದ
ಅಧಿಕೃತ
ಅಭ್ಯರ್ಥಿಗಳಾಗುವ
ಸಾಧ್ಯತೆಗಳಿವೆ.
ಈ
ಚುನಾವಣೆ
ಬಿಜೆಪಿಗೆ
ಪ್ರತಿಷ್ಠೆಯ
ಪ್ರಶ್ನೆಯಾಗಿದೆ.
ಆದ್ದರಿಂದ
ಈ
ಚುನಾವಣೆ
ಮಿನಿ
ಮಹಾಸಮರ
ಎಂದೇ
ಪರಿಗಣಿಸಲಾಗಿದೆ.
ಜತೆಗೆ
ಸರ್ಕಾರದ
ಅಳಿವು
ಉಳಿವಿನ
ಪ್ರಶ್ನೆ
ಎಂದೇ
ಬಿಂಬಿಸಲಾಗುತ್ತಿದೆ.
(ದಟ್ಸ್
ಕನ್ನಡ
ವಾರ್ತೆ)