ಬೆಂಗಳೂರಿನಲ್ಲಿ ಸುದರ್ಶನ ಕ್ರಿಯಾಯೋಗ
ಬೆಂಗಳೂರು, ನ. 24: ಕಳೆದುಹೋದ ಘಟನೆಗಳ ಬಗ್ಗೆ ಕ್ರೋಧ-ಭವಿಷ್ಯದ ಬಗ್ಗೆ ಆತಂಕ; ಅದರ ಪರಿಣಾಮವಾಗಿ ಮಾನಸಿಕ ಒತ್ತಡ. ಅದು ಮುಂದುವರೆದು ಅನಿಶ್ಚಿತತೆ, ನಿರುತ್ಸಾಹ, ಮನೋದೈಹಿಕ ಬೇನೆ, ಯಾಂತ್ರಿಕ ಬದುಕು ಮತ್ತು ಮುಖ್ಯವಾಗಿ ಬಾಂಧವ್ಯಗಳಲ್ಲಿ ಬಿರುಕು. ಆಧುನಿಕ ಜೀವನ ಶೈಲಿ ಮನುಕುಲಕ್ಕೆ ಬಳವಳಿಯಾಗಿ ನೀಡಿರುವ ಅನೇಕ ನೋವುಗಳ ಸಾರಸಂಗ್ರಹವೇ ಇದು.
ಕಿತ್ತು ತಿನ್ನುವ , ಹೇಳಿಕೊಳ್ಳಲಾರದ ಯಾತನೆಗಳಿಂದ ಪಾರಾಗುವ ಬಗೆ ಹೇಗೆ ? ಅಶಾಂತಿಯನ್ನು ದೂರತಳ್ಳಿ, ಮಾನಸಿಕ ನೆಮ್ಮದಿಯನ್ನು ಮತ್ತೆ ಕಂಡುಕೊಳ್ಳುವುದಕ್ಕೆ ಬೆಂಗಳೂರಿನಲ್ಲಿ ಅನೇಕ ಮಾರ್ಗೋಪಾಯಗಳುಂಟು. ಅವುಗಳಲ್ಲಿ ಶ್ರೀ ರವಿಶಂಕರ್ ಅವರು ಪ್ರತಿಪಾದಿಸುವ ಜೀವನಕಲೆ ಅರ್ಥಾತ್ ಸುದರ್ಶನ ಕ್ರಿಯಾಯೋಗ ಅನೇಕರ ಗಮನ ಸೆಳೆಯುತ್ತಲಿದೆ. ಸಾರ್ವಜನಿಕರಿಗೆ ಬಹೂಪಯೋಗಿಯಾಗುವ ಜೀವನಕಲೆ ಶಿಬಿರಗಳನ್ನು ಆರ್ಟ್ ಆಫ್ ಲಿವಿಂಗ್ ಫೊಂಡೇಶನ್ ಜಗತ್ತಿನಾದ್ಯಂತ ನಡೆಸುತ್ತಿರುತ್ತದೆ.
ನಮ್ಮ ಸಿಲಿಕಾನ್ ಕಣಿವೆಯ ಗಲ್ಲಿಗಲ್ಲಿಗಳಲ್ಲಿ ದುಡಿದು ದುಡಿದು ಸುಸ್ತಾದ, ಬಳಲಿ ಬಂಡಾದ ಅನೇಕ ಮನಸ್ಸುಗಳಿವೆ. ಅಂಥ ಮನಸ್ಸುಗಳಿಗೆ ಸಾಂತ್ವನ ನೀಡುವುದು ಮತ್ತು ಬದುಕನ್ನು ಚೇತೋಹಾರಿಗಿಸುವ ನಿಟ್ಟಿನಲ್ಲಿ ಜೀವನಕಲೆಯನ್ನು ತಿಳಿಯಹೇಳುವ ಸುದರ್ಶನ ಕ್ರಿಯಾಯೋಗ ಶಿಬಿರ ಬೆಂಗಳೂರಿನಲ್ಲಿ ವ್ಯವಸ್ಥೆಯಾಗಿದೆ. ಜೆಪಿನಗರ ಮತ್ತು ಹೊಸೂರು ರಸ್ತೆಗಳ ನಡುವಿನ ಜನನಿಬಿಡ, ವಾಹನನಿಬಿಡ, ಸಾಫ್ಟ್ ವೇರ್ ಪ್ರೊಗ್ರಾಮುದಾರರ ಕಾಯಕಕ್ಷೇತ್ರ ಬನ್ನೇರುಘಟ್ಟ ರಸ್ತೆಯಲ್ಲಿ ರವಿಶಂಕರರ ಶಿಬಿರ ಇಂದಿನಿಂದ ಆರಂಭವಾಗಿದೆ.
ಸುದರ್ಶನ ಕ್ರಿಯಾಯೋಗಕ್ಕೆ ನೀವು ಸೇರಿಕೊಳ್ಳುತ್ತೀರೋ ಹೇಗೆ? ಚಿಂತೆಗಳಿಗೆ ವಿರಾಮ ಹಾಕಿ ಜೀವನಕ್ಕೊಂದು ಹೊಸ ಆಯಾಮ ನೀಡಲು ಬಯಸುತ್ತೀರೇನು? ಬನ್ನಿ, ಜೀವನವನ್ನು ಆನಂದಿಸೋಣ.
ಶಿಬಿರದ ದಿನಾಂಕಗಳು : 24 ನೇ ನವೆಂಬರ್ ನಿಂದ 30 ನೆ ನವಂಬರ್ ತನಕ. ಸ್ಥಳ ಗುರುಕೃಪಾ ಸೆಂಟರ್, ಮಂತ್ರಿ ಪ್ಯಾರಡೈಸ್ ಎದಿರು, ರಿಲಾಯನ್ಸ್ ಮಾರ್ಟ್ ಪಕ್ಕ, ಅರಕೆರೆ, ಬನ್ನೇರುಘಟ್ಟ ರಸ್ತೆ. ಬೆಂಗಳೂರು- 560 076. ಶಿಬಿರದ ಸಮಯ: ಬೆಳಿಗ್ಗೆ 6 ರಿಂದ 8. ಮಧ್ಯಾನ್ಹ 11 ರಿಂದ 1.30, ಸಂಜೆ 6.30 ರಿಂದ 9.00
ಹೆಸರನ್ನು
ನೊಂದಾಯಿಸಿಕೊಳ್ಳಲು
ಕರೆ
ಮಾಡಿ.
99456
02453,
99868
37175,
97401
46205
(
ದಟ್ಸ್
ಕನ್ನಡ
ವಾರ್ತೆ)