ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಸ್ಲಿಂಗೆ ಊಟ ಹಾಕಿದ್ದಕ್ಕೆ ಬ್ರಾಹ್ಮಣನ ಬಹಿಷ್ಕಾರ

By Staff
|
Google Oneindia Kannada News

ಕೋಲ್ಕತ್ತಾ, ನ.22 : ಮುಸ್ಲಿಂ ಬಾಲಕನನ್ನು ಮನೆಗೆ ಕರೆದು ಊಟ ಕೊಟ್ಟ 50 ವರ್ಷದ ಅರ್ಚಕನಿಗೆ ಊರಿಂದ ಬಹಿಷ್ಕಾರ ಹಾಕಿದ ಘಟನೆ ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ ಜಿಲ್ಲೆಯ ಚಂದ್ರಮೆರ್ ಎನ್ನುವ ತೃಣಮೂಲ ಕಾಂಗ್ರೆಸ್ ಆಳ್ವಿಕೆಯ ಗ್ರಾಮ ಪಂಚಾಯತ್ ಒಂದರಲ್ಲಿ ನಡೆದಿದೆ.

ಲಕ್ಷ್ಮಿಕಾಂತ್ ಚಕ್ರವರ್ತಿ ಎಂಬ ಬ್ರಾಹ್ಮಣ ತನ್ನ ಪುತ್ರನ ಸ್ನೇಹಿತ ಶೇಖ್ ಚೋಟುನನ್ನು ಮನೆಗೆ ಕರೆದು ಊಟ ಹಾಕಿದರು. ಇದು ಗ್ರಾಮ ಪಂಚಾಯತ್ ಸದಸ್ಯರನ್ನು ಕೆರಳಿಸಿತು. ಸದಸ್ಯರು ಅರ್ಚಕರನ್ನು ಕರೆಸಿ ಅವರ ಕುಟುಂಬದವರ ಉಗುರು ಕತ್ತರಿಸಲು ಹೇಳಿದರು. ಅದನ್ನು ಚಕ್ರವರ್ತಿ ಪಾಲಿಸಿದರು ಅದಾದ ಮೇಲೆ ಕುಟುಂಬದವರ ತಲೆ ಬೋಳಿಸಲು ಹೇಳಿದರು. ಅದನ್ನು ಪಾಲಿಸಲು ಒಪ್ಪದೇ ಇದ್ದಾಗ ಅರ್ಚಕರನ್ನ ಗ್ರಾಮದಿಂದಲೇ ಬಹಿಷ್ಕಾರ ಹಾಕಿದರು ಎಂದು ತಿಳಿದುಬಂದಿದೆ.
(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X