ಉಗ್ರರ ದಮನಕ್ಕೆ ಕೋಕಾ ಜಾರಿ: ಸಿಎಂ
ಬೆಂಗಳೂರು, ನ. 11 : ರಾಜ್ಯದಲ್ಲಿ ಉಗ್ರವಾದಿ ಚಟುವಟಿಕೆ ಧಮನಕ್ಕೆ ಶೀಘ್ರವೇ ಉಗ್ರರ ನಿಗ್ರಹ ದಳ ರಚನೆ, ಸಂಘಟಿತ ಅಪರಾಧಗಳ ತಡೆಗೆ ಕೋಕಾ ಕಾಯ್ದೆ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕೇಂದ್ರ ಕಚೇರಿಯಲ್ಲಿ ಸೋಮವಾರ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ನಡೆಸಿದ ಪೊಲೀಸ್ ಮಂಥನ ಕಾರ್ಯಕ್ರಮದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಭಾವೈಕ್ಯತೆ ರಕ್ಷಣೆಗೆ ಜಿಲ್ಲಾ, ತಾಲ್ಲೂಕು ಮತ್ತು ಮತ್ತು ರಾಜ್ಯ ಮಟ್ಟದ ಸಮಿತಿಗಳ ರಚನೆ ಮಾಡಲಾಗುವುದು ಎಂದರು. ನಕ್ಸಲ್ ನಿಗ್ರಹ ದಳಕ್ಕೆ ಇನ್ನಷ್ಟು ಬಲ ನೀಡುವ ಮೂಲಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲಾಗುವುದು ಎಂದು ಅವರು ಭರವಸೆ ನೀಡಿದರು. ಪೊಲೀಸ್ ವರ್ಗಾವಣೆಗೆ ಸಂಬಂಧಿಸಿದಂತೆ ಸ್ಪಷ್ಟ ನೀತಿಯೊಂದನ್ನು ಸಹ ರೂಪಿಸಲಾಗುವುದು ಎಂದು ಯಡಿಯೂರಪ್ಪ ಹೇಳಿದರು.
ಪೊಲೀಸ್
ಇಲಾಖೆಗೆ
ಸಂಬಂಧಿಸಿದಂತೆ
ಆಡಳಿತ
ಸುಧಾರಣೆಗೆ
ಅನೇಕ
ಕ್ರಮಗಳನ್ನು
ಮುಖ್ಯಮಂತ್ರಿಗಳು
ಪ್ರಕಟಿಸಿದರು.
ಈಗಿರುವ
ಪೊಲೀಸ್
ಠಾಣೆಗಳನ್ನು
ಆಡಳಿತದ
ದೃಷ್ಟಿಯಿಂದ
ಮರುವಿಂಗಡಣೆ
ಮಾಡಲು
ತೀರ್ಮಾನಿಸಲಾಗಿದೆ.
ಇದಕ್ಕೆ
ಸಂಬಂದಪಟ್ಟಂತೆ
ಅಧ್ಯಯನ
ಸಮಿತಿ
ರಚಿಸಲಾಗುವುದು.
ಸಮಿತಿ
ನೀಡಿದ
ವರದಿ
ಆಧರಿಸಿ
ಮರುವಿಂಗಡಣೆ
ಕಾರ್ಯಕ್ಕೆ
ಚಾಲನೆ
ನೀಡಲಾಗುವುದು
ಎಂದು
ಹೇಳಿದರು.
(ದಟ್ಸ್
ಕನ್ನಡ
ವಾರ್ತೆ)