ಶಿರಾಡಿ ರಸ್ತೆ ದುರಸ್ತಿಗೆ ಗುತ್ತಿಗೆದಾರರ ಅಭಾವ
ಮಂಗಳೂರು, ನ. 11 : ಮಂಗಳೂರು-ಬೆಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ರಸ್ತೆಯ ದುರಸ್ತಿ ಕಾಮಗಾರಿ ವಹಿಸಿಕೊಳ್ಳಲು ಗುತ್ತಿಗೆದಾರರು ಹಿಂದೇಟು ಹಾಕುತ್ತಿದ್ದಾರೆ ಎಂದು ಕೇಂದ್ರ ಆಡಳಿತ ಸುಧಾರಣಾ ಸಮಿತಿ ಅಧ್ಯಕ್ಷ ನಾಯಕ ಎಂ. ವೀರಪ್ಪ ಮೊಯ್ಲಿ ತಿಳಿಸಿದ್ದಾರೆ. ಇತ್ತೀಚಿಗೆ ಶಿರಾಡಿ ಘಾಟ್ ಕಳಪೆ ರಸ್ತೆ ದುರಸ್ತಿ ಕಾಮಗಾರಿ ಕುರಿತು ರಾಜ್ಯ ಹೈಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಿರುವುದು ಇದಕ್ಕೆ ಕಾರಣ ಇರಬಹುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸುಮಾರು 40 ಕಿಲೋ ಮೀಟರ್ ಉದ್ದದ ಗುಂಡ್ಯ- ಉಪ್ಪಿನಂಗಡಿವರೆಗಿನ 14 ಕೋಟಿ ರೂ.ವೆಚ್ಚದ ಕಾಮಗಾರಿಯನ್ನು ವಹಿಸಿಕೊಳ್ಳಲು ಗುತ್ತಿಗೆದಾರರು ನಿರಾಸಕ್ತಿ ತೋರುತ್ತಿದ್ದಾರೆ. ಯೋಜನೆ ಹಾಗು ಏಜನ್ಸಿ ಕೂಡ ಮಂಜೂರಾಗಿದ್ದು ಗುತ್ತಿಗೆದಾರರ ಅಭಾವದಿಂದ ಕೆಲಸದಲ್ಲಿ ವಿಳಂಬವಾಗುತ್ತಿದೆ ಎಂದು ಸೋಮವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ನೆಲಮಂಗಲದಿಂದ ಹಾಸನದವರೆಗಿನ ಚತುಷ್ಪಥ ಕಾಮಗಾರಿ ಈಗಾಗಲೇ ಬಹುಪಾಲು ಪೂರ್ಣಗೊಂಡಿದೆ. ಹದಗೆಟ್ಟಿರುವ ಶಿರಾಡಿ ಘಾಟ್ ರಸ್ತೆ ದುರಸ್ಥಿಗೆ ರಾಜ್ಯ ಸರ್ಕಾರ ಅಂದಾಜು 4 ಕೋಟಿ ರೂ. ವೆಚ್ಚ ಮಾಡಬೇಕಿದೆ. ಹಾಸನದಿಂದ ಬಿ.ಸಿ.ರಸ್ತೆವರೆಗಿನ ಚತುಷ್ಪಥ ಕಾಮಗಾರಿಯ ಸಾಧ್ಯತೆಗಳ ಬಗ್ಗೆ ಕೇಂದ್ರ ಭೂ ಸಾರಿಗೆ ಸಚಿವ ಮುನಿಯಪ್ಪ ಜೊತೆ ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿದರು.
ರಾಷ್ಟ್ರೀಯ
ಹೆದ್ದಾರಿ
48ರ
ಈ
ಯೋಜನೆಯನ್ನು
ಅನುಷ್ಠಾನಗೊಳಿಸಿದರೆ
ಈ
ಭಾಗದ
ಜನತೆಯ
ಸಮಸ್ಯೆ
ತಪ್ಪುತ್ತದೆ,
ಆದರೆ
ಅಭಿವೃದ್ಧಿ
ಕಾರ್ಯವನ್ನು
ಮರೆತಿರುವ
ಬಿಜೆಪಿ
ಸರ್ಕಾರ,
ಆಪರೇಷನ್
ಕಮಲದಲ್ಲಿ
ತಲ್ಲೀನವಾಗಿದೆ
ಎಂದು
ಮೊಯ್ಲಿ
ಆಕ್ರೋಶ
ವ್ಯಕ್ತಪಡಿಸಿದರು.
(ದಟ್ಸ್
ಕನ್ನಡ
ವಾರ್ತೆ)