ಮ್ಯಾಗಿ ರಾಜೀನಾಮೆ:ಕಾಂಗ್ರೆಸ್ಸಿಗರ ಅನಿಸಿಕೆಗಳು
ಬೆಂಗಳೂರು, ನ. 11 : ಕಾಂಗ್ರೆಸ್ ಹಿರಿಯ ನಾಯಕಿ ಮಾರ್ಗರೆಟ್ ಆಳ್ವ ಎಐಸಿಸಿ ಪ್ರದಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿರುವುದು ಪಕ್ಷದೊಳಗೆ ಭಾರಿ ಬೆಳವಣಿಗೆಗಳು ಕಂಡು ಬರತೊಡಗಿವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಗಳು ಮಾರಾಟವಾಗಿವೆ ಎಂದು ಆಳ್ವ ಗಂಭೀರ ಆರೋಪ ಮಾಡಿದ್ದರು. ಇದರಿಂದ ಹೈಕಮಾಂಡ್ ಅವರು ವಿರುದ್ಧ ಶಿಸ್ತು ಕ್ರಮ ಜಾರಿಗೊಳಿಸುವ ಪೂರ್ವದಲ್ಲಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಪಕ್ಷದ ಹಿರಿಯ ನಾಯಕಿ ತೆಗೆದುಕೊಂಡಿರುವ ನಿರ್ಧಾರಕ್ಕೆ ಪಕ್ಷದ ಮುಖಂಡರಿಂದ ಕೇಳಿ ಬಂದಿರುವ ಮಾತುಗಳು.
ಆರೋಪದಲ್ಲಿ
ಹುರುಳಿಲ್ಲ
:
ವೀರಪ್ಪ
ಮೊಯ್ಲಿ
ಮಾರ್ಗರೆಟ್
ಆಳ್ವ
ಮಾಡಿರುವ
ಆರೋಪಗಳಿಗೆ
ಯಾವುದೇ
ಆಧಾರವಿಲ್ಲ.
ಈ
ಮೂಲಕ
ಪಕ್ಷದ
ಸಂವಿಧಾನವನ್ನು
ಸ್ಪಷ್ಟವಾಗಿ
ಉಲ್ಲಂಘನೆ
ಮಾಡಿದಂತಾಗಿದೆ.
ಆಧಾರ
ರಹಿತ
ಆರೋಪಗಳನ್ನು
ಮಾಡಿರುವ
ಹಿನ್ನೆಲೆಯಲ್ಲಿ
ಅವರು
ವಿರುದ್ಧ
ಹೈಕಮಾಂಡ್
ಶಿಸ್ತು
ಕ್ರಮ
ಜರುಗಿಸಲಿದೆ
ಎನ್ನುವುದು
ಕೇಂದ್ರ
ಆಡಳಿತ
ಸುಧಾರಣಾ
ಸಮಿತಿ
ಅಧ್ಯಕ್ಷ
ಎಂ.
ವೀರಪ್ಪ
ಮೊಯ್ಲಿ
ಅಭಿಪ್ರಾಯವಾಗಿದೆ.
ಇದು
ದುರದೃಷ್ಟಕರ
ಸಂಗತಿ
:
ಧರಂಸಿಂಗ್
ಪಕ್ಷದ
ಹಿರಿಯ
ನಾಯಕಿಯಾಗಿದ್ದ
ಮಾರ್ಗರೆಟ್
ಆಳ್ವ
ಅವರು
ಪಕ್ಷ
ಪ್ರದಾನ
ಕಾರ್ಯದರ್ಶಿ
ಸ್ಥಾನಕ್ಕೆ
ರಾಜೀನಾಮೆ
ನೀಡಿರುವುದು
ದುರದೃಷ್ಟಕರ
ಸಂಗತಿಯಾಗಿದೆ.
ಬೇಜವಾಬ್ದಾರಿ
ಹೇಳಿಕೆಯಿಂದ
ಪಕ್ಷದ
ವರ್ಚಸ್ಸಿಗೆ
ತೀವ್ರ
ದಕ್ಕೆ
ಉಂಟಾಗಿದೆ.
ಅವರಿಂದ
ಇಂತಹ
ಹೇಳಿಕೆಯನ್ನು
ನಿರೀಕ್ಷಿಸಿರಲಿಲ್ಲ.
ರಾಜೀನಾಮೆ
ನೀಡಿರುವ
ಕ್ರಮ
ಸರಿಯಲ್ಲ
ಎಂದು
ಧರಂಸಿಂಗ್
ಹೇಳಿದ್ದಾರೆ.
ರಾಜೀನಾಮೆ
ಬಗ್ಗೆ
ಮಾಹಿತಿ
ಇಲ್ಲ
:
ಮಲ್ಲಿಕಾರ್ಜುನ
ಖರ್ಗೆ
ಮಾರ್ಗರೆಟ್
ಆಳ್ವ
ಪಕ್ಷ
ಪ್ರದಾನ
ಕಾರ್ಯದರ್ಶಿ
ಹುದ್ದೆಗೆ
ರಾಜೀನಾಮೆ
ನೀಡಿರುವುದು
ನನಗೆ
ತಿಳಿದಿಲ್ಲ.
ತಿಳಿದಿರುವ
ವಿಷಯಕ್ಕೆ
ಪ್ರತಿಕ್ರಿಯೆ
ನೀಡುವ
ಉತ್ತಮವಲ್ಲ.
ಅಧಿಕೃತ
ಮಾಹಿತಿ
ಬಂದ
ಈ
ಕುರಿತು
ಪ್ರತಿಕ್ರಿಯೆಸುವುದಾಗಿ
ಖರ್ಗೆ
ಜಾರಿಕೊಂಡರು.
ಮ್ಯಾಗಿ
ಆರೋಪದಲ್ಲಿ
ಹುರುಳಿದೆ
:
ಪಿ.
ಕೋದಂಡರಾಮಯ್ಯ
ಮಾರ್ಗರೆಟ್
ಆಳ್ವ
ಆರೋಪದಲ್ಲಿ
ಹುರುಳಿಲ್ಲ
ಎನ್ನಲು
ಸಾಧ್ಯವಿಲ್ಲ.
ಪಕ್ಷದ
ಹಿರಿಯ
ನಾಯಕಿ
ಆಗಿರುವ
ಅವರು
ಇಂತಹ
ಗಂಭೀರ
ಮಾಡಲು
ಸಕಾರಣವಿದೆ.
ಅದ್ದರಿಂದ
ಇದರ
ಸತ್ಯಾಸತ್ಯತೆ
ತಿಳಿಯಲು
ಸತ್ಯ
ಶೋಧನಾ
ಸಮಿತಿ
ರಚಿಸಬೇಕಾದ
ಅಗತ್ಯವಿದೆ
ಎಂದು
ಸಿದ್ದು
ಬಣದಲ್ಲಿ
ಗುರುತಿಸಿಕೊಂಡಿರುವ
ಮಾಜಿ
ಸಂಸದ
ಪಿ.ಕೋದಂಡರಾಮಯ್ಯ
ಹೇಳಿದ್ದಾರೆ.
ಬಿಜೆಪಿಗೆ
ಬಂದರೆ
ಭವ್ಯ
ಸ್ವಾಗತ
:
ಸದಾನಂದಗೌಡ
ಪಕ್ಷದಲ್ಲಿನ
ಆಂತರಿಕ
ಬೇಗುದಿಯನ್ನು
ಮಾರ್ಗರೆಟ್
ಆಳ್ವ
ಹೊರಹಾಕಿದ್ದಾರೆ.
ಇದರಿಂದ
ಕಾಂಗ್ರೆಸ್
ಪಕ್ಷ
ಎತ್ತ
ಸಾಗುತ್ತಿದೆ
ಎನ್ನುವುದು
ಜಗಜ್ಯಾಹೀರಾಗಿದೆ.
ಆಳ್ವ
ಇದೀಗ
ಪಕ್ಷದ
ಪ್ರದಾನ
ಕಾರ್ಯದರ್ಶಿ
ಹುದ್ದೆಗೆ
ರಾಜೀನಾಮೆ
ನೀಡಿದ್ದಾರೆ.
ಮುಂದಿನ
ದಿನಗಳಲ್ಲಿ
ಕಾಂಗ್ರೆಸ್
ಪಕ್ಷ
ಅವರನ್ನು
ಉಚ್ಚಾಟಿಸಬಹುದು.
ಇಲ್ಲವೇ
ಅವರೇ
ಪಕ್ಷದಿಂದ
ಹೊರ
ನಡೆಯಬಹುದು
ಎಂದು
ಬಿಜೆಪಿ
ರಾಜ್ಯಾಧ್ಯಕ್ಷ
ಡಿ.ವಿ.ಸದಾನಂದಗೌಡ
ಭವಿಷ್ಯ
ನುಡಿದಿದ್ದಾರೆ.
ಮಾರ್ಗರೆಟ್
ಬಿಜೆಪಿ
ಸೇರ್ಪಡೆಗೆ
ಮನಸ್ಸು
ಮಾಡಿದಲ್ಲಿ
ಭವ್ಯವಾಗಿ
ಅವರನ್ನು
ಪಕ್ಷಕ್ಕೆ
ಸೇರ್ಪಡೆ
ಮಾಡಿಕೊಳ್ಳುವುದರ
ಜೊತೆಗೆ
ಪಕ್ಷದಲ್ಲಿ
ಸೂಕ್ತ
ಸ್ಥಾನಮಾನ
ನೀಡಲಾಗುವುದು
ಎಂದು
ಅವರು
ಹೇಳಿದರು.
(ದಟ್ಸ್ ಕನ್ನಡ ವಾರ್ತೆ)