ಭಾರತೀಯ ಬ್ಯಾಂಕುಗಳಿಗೆ ಅಪಾಯವಿಲ್ಲ
ಕೊಚ್ಚಿ, ನ. 11: ಜಾಗತಿಕ ಆರ್ಥಿಕ ಕ್ಷೇತ್ರ ಉಂಟಾಗಿರುವ ತೀವ್ರ ಹಿನ್ನೆಡೆಯಿಂದ ಭಾರತಕ್ಕೆ ಸ್ವಲ್ಪ ಪ್ರಮಾಣದ ಹೊಡೆತ ಬಿದ್ದಿರುವುದು ನಿಜ. ಆದರೆ ಅಮೆರಿಕದಂತೆ ಬ್ಯಾಂಕುಗಳು ಮುಚ್ಚುವ ಮಟ್ಟಕ್ಕೆ ಭಾರತ ತಲುಪಿಲ್ಲ. ಅರ್ಥಿಕತೆ ದೃಷ್ಟಿಯಿಂದ ಭಾರತ ಇನ್ನೂ ಸಬಲ ಸ್ಥಿತಿಯನ್ನು ಕಾಯ್ದುಕೊಂಡಿದೆ ಸಿಂಡಿಕೇಟ್ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಾರ್ಜ್ ಜೋಸೆಫ್ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಕ್ಯಾಪಿಟಲ್ ಮಾರ್ಕೆಟ್ ಮೇಲೆ ಆಧಾರಿತವಾಗಿರುವ ಕೆಲ ಬ್ಯಾಂಕುಗಳಿಗೆ ಇದರ ನೇರ ಪರಿಣಾಮ ಬೀರಿದೆ ಎಂದರು. ಅಮೆರಿಕದಲ್ಲಿ ಉಂಟಾಗಿರುವ ಆರ್ಥಿಕ ಹಿನ್ನೆಡೆಯ ಪರಿಣಾಮ ಭಾರತೀಯ ಬ್ಯಾಂಕುಗಳ ಮೇಲೆ ಬಿದ್ದಿದೆ. ಬ್ಯಾಂಕುಗಳು ದಿವಾಳಿಯಾಗಲಿವೆ ಎನ್ನುವ ಗಾಳಿ ಮಾತುಗಳಿಗೆ ಅರ್ಥವಿಲ್ಲ. ಭಾರತೀಯ ಯಾವ ಬ್ಯಾಂಕುಗಳು ಮೇಲೆ ಇದರ ಪರಿಣಾಮ ಅಷ್ಟಾಗಿ ಬೀರಿಲ್ಲ. ಎಂದಿನಂತೆ ಸಹಜ ಸ್ಥಿತಿಯಲ್ಲಿ ಬ್ಯಾಂಕುಗಳ ಕಾರ್ಯನಿರ್ವಹಿಸತೊಡಗಿವೆ ಎಂದು ಅವರು ಸ್ಪಷ್ಟಪಡಿಸಿದರು.
ಕ್ಯಾಪಿಟಲ್
ಮಾರ್ಕೆಟ್
ಮೇಲೆ
ನಡೆಯುತ್ತಿರುವ
ಬ್ಯಾಂಕುಗಳು
ಇದರ
ಪರಿಣಾಮವನ್ನು
ಎದುರಿಸಬೇಕಾಗುತ್ತದೆ.
ಇದು
ಅನಿವಾರ್ಯವೂ
ಕೂಡಾ
ಆಗಿದೆ
ಎಂದು
ಜೋಸೆಫ್
ತಿಳಿಸಿದರು.
ಆರ್ಥಿಕತೆ
ಹಿನ್ನೆಡೆಯಿಂದ
ವಿದೇಶಿ
ಬಂಡವಾಳದಾರರೂ
ಬಂಡವಾಳ
ಹೂಡಲು
ಹಿಂದೆ
ಸರಿದಿರುವುದು
ಇದಕ್ಕೆ
ಸ್ಪಷ್ಟ
ಕಾರಣವಾಗಿದೆ
ಎಂದು
ಅವರು
ವಿವರಿಸಿದರು.
(ದಟ್ಸ್
ಕನ್ನಡ
ವಾರ್ತೆ)