ನ.15 ರಂದು ಕನಕ ಜಯಂತಿಗೆ ಅದ್ಧೂರಿ ಸಿದ್ಧತೆ
ಬೆಂಗಳೂರು, ನ. 10 : ಕನಕದಾಸರ ಹುಟ್ಟೂರು ಹಾವೇರಿ ಜಿಲ್ಲೆಯ ಬಾಡ ಗ್ರಾಮದಲ್ಲಿ ಇದೇ 15 ರಂದು ಕನಕ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ. ಈ ಕುರಿತು ಈಗಾಗಲೇ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಇದರ
ಜೊತೆಗೆ
ವಿಧಾನಸೌಧದ
ಮುಂಭಾಗದಲ್ಲಿ
ಈ
ಸಂಬಂಧ
ಅದ್ದೂರಿ
ಸಮಾರಂಭ
ಆಯೋಜಿಸಲಾಗುವುದು.
ವಿಧಾನಸೌಧದ
ಬ್ಯಾಂಕ್ವೆಟ್
ಹಾಲ್
ನಲ್ಲಿ
ಅಂದು
ವಿವಿಧ
ಸಾಂಸ್ಕೃತಿಕ
ಕಾರ್ಯಕ್ರಮ
ನಡೆಯಲಿದೆ
ಎಂದು
ಹೇಳಿದರು.
ಮುಖ್ಯವಾಗಿ
ಸಮಾಜಕ್ಕೆ
ಸೇವೆ
ಸಲ್ಲಿಸಿದ
ಗಣ್ಯರನ್ನು
ಸನ್ಮಾನಿಸುವುದು.
ಕನಕದಾಸರ
ಜನ್ಮಸ್ಥಳವಾದ
ಬಾಡ
ಗ್ರಾಮದಲ್ಲಿ
2
ಕೋಟಿ
ರೂ.
ವೆಚ್ಚದಲ್ಲಿ
ವಿವಿಧ
ಅಭಿವೃದ್ಧಿ
ಕಾಮಗಾರಿಗೆ
ಅಧಿಕೃತ
ಚಾಲನೆ.
ಮುಂದಿನ
ಅಧಿವೇಶನದಲ್ಲಿ
ಕಾಗಿನೆಲೆ
ಅಭಿವೃದ್ಧಿ
ಪ್ರಾಧಿಕಾರ
ವಿಧೇಯಕವನ್ನು
ಮಂಡಿಸಿ,
ಶಾಸನ
ರೂಪಿಸುವುದು.
ಈಗಾಗಲೇ
ರಾಜ್ಯ
ಸರ್ಕಾರ
ಕನಕ
ಜಯಂತಿಗೆ
ಸಾರ್ವತ್ರಿಕ
ರಜೆ
ಘೋಷಿಸಿದ್ದನ್ನು
ಇಲ್ಲಿ
ಸ್ಮರಿಸಬಹುದು
ಎಂದು
ಕರಂದ್ಸಾಜೆ
ಹೇಳಿದರು.
(ದಟ್ಸ್
ಕನ್ನಡ
ವಾರ್ತೆ)