ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಡಿಎಸ್ ಕಚೇರಿಯಲ್ಲಿ ಹೋಮ ಹವನ

By Staff
|
Google Oneindia Kannada News

ಬೆಂಗಳೂರು, ನ. 10 : ಜೆಡಿಎಸ್ ಕಚೇರಿ ಇಂದು ದೇವಸ್ಥಾನದಂತೆ ಕಂಗೊಳಿಸುತ್ತಿತ್ತು. ಕಚೇರಿಯ ತುಂಬೆಲ್ಲಾ ತಳಿರು ತೋರಣ, ಹೂಗುಚ್ಛಗಳು ಜೊತೆಗೆ ಮಂತ್ರಗಳ ಪಠಣ ಭರ್ಜರಿಯಾಗಿ ನಡೆಯಿತು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿಯಿಂದಲೇ ರೇಸ್ ಕೋರ್ಸ್ ರಸ್ತೆಯಲ್ಲಿರುವ ಪಕ್ಷದ ಕಚೇರಿಯಲ್ಲಿ ಗಣ, ರುದ್ರ, ನವಗ್ರಹ, ಚಂಡಿ ಹೋಮಗಳು ಸೇರಿದಂತೆ ವಿವಿಧ ಪೂಜೆ ಪುನಸ್ಕಾರಗಳು ಸಾಂಗೋಪಾಂಗವಾಗಿ ಜರುಗಿದವು.

ಕುಮಾರಸ್ವಾಮಿ ಶುಭ ಹಾರೈಕೆಯ ಕಟೌಟ್ ಗಳು ಒಂದೆಡೆ ರಾರಾಜಿಸುತ್ತಿದ್ದರೆ, ಇನ್ನೊಂದೆಡೆ ಪುತ್ರನ ಸ್ಥಾನ ಭದ್ರವಾಗಿರಲಿ ಎಂದು ದೇವೇಗೌಡರು ವಾಸ್ತು ಪ್ರಕಾರ ಸದ್ಯದ ರಾಜ್ಯಾಧ್ಯಕ್ಷರ ಕೊಠಡಿಯನ್ನು ಬದಲಿಸಿದ್ದಾರೆ. ತಾವು ಜೆಡಿಎಸ್ ರಾಜ್ಯಾಧ್ಯರಾಗಿದ್ದ ಕೊಠಡಿಗೆ ಅಧ್ಯಕ್ಷರ ಕೊಠಡಿಯನ್ನು ಸ್ಥಳಾಂತರಿಸಿದ್ದಾರೆ. ತಮ್ಮ ರಾಜಕೀಯ ಏಳಿಗೆಗೆ ಕಾರಣವಾಗಿರುವ ಕೊಠಡಿಯಿಂದಲೇ ಅವರು ರಾಜ್ಯದ ಮುಖ್ಯಮಂತ್ರಿಯಾಗಿ, ದೇಶದ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಸುಯೋಗ ಒದಗಿಬಂದಿತ್ತು. ಈ ಹಿನ್ನೆಲೆಯಲ್ಲಿ ತಮ್ಮ ಪುತ್ರನಿಗೂ ಅಂತಹ ಭಾಗ್ಯ ದೊರೆಯಬೇಕು ಎನ್ನುವುದು ದೇವೇಗೌಡರ ಆಶಯವಾದಂತಿದೆ.

ನ. 17 ರಂದು ನಗರದ ಅರಮನೆ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪಕ್ಷ ಕಾರ್ಯಕರ್ತರ ಸಮ್ಮುಖದಲ್ಲಿ ಕುಮಾರಸ್ವಾಮಿ ಪಕ್ಷದ ರಾಜ್ಯಾಧ್ಯಕ್ಷರಾಗಿ ಅಧಿಕೃತವಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಪಕ್ಷದ ಹಿರಿಯ ಮುಖಂಡರ ಸಮಕ್ಷಮದಲ್ಲಿ ಕುಮಾರಸ್ವಾಮಿ ಇಂದು ಅಧ್ಯಕ್ಷ ಪದವಿ ಪದಗ್ರಹಮ ಮಾಡಲಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X