ಆಳ್ವ ವಿರುದ್ಧ ಶಿಸ್ತು ಕ್ರಮ ಸಾಧ್ಯತೆ
ನವದೆಹಲಿ, ನ. 7 : ಮಾರ್ಗರೆಟ್ ಅಳ್ವ ಮಾಡಿರುವ ಆಪಾದನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಹೈಕಮಾಂಡ್ ಅವರ ವಿರುದ್ಧ ಶಿಸ್ತು ಕ್ರಮ ಜಾರಿಗೊಳಿಸುವ ಸಾಧ್ಯತೆಗಳಿವೆ. ಆಳ್ವ ಮಾಡಿರುವ ಆರೋಪಗಳು ಕಾಂಗ್ರೆಸ್ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಆರೋಪಗಳ ಸಮಗ್ರ ವರದಿ ಸಿದ್ಧಪಡಿಸಲು ಹೈಕಮಾಂಡ್ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ನೇತೃತ್ವದಲ್ಲಿ ಸಮಿತಿ ರಚಿಸಿದೆ.
ಸೋನಿಯಾಗಾಂಧಿ ಪರಮಾಪ್ತರೆಂದೇ ಗುರುತಿಸಿಕೊಂಡಿದ್ದ ಮಾರ್ಗರೆಟ್ ಅಳ್ವ ಮಾಡಿರುವ ಆರೋಪಗಳಿಗೆ ಕೇಂದ್ರ ಮತ್ತು ರಾಜ್ಯ ನಾಯಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪುತ್ರ ನಿವೇದಿತ ಹಾಗೂ ಜಾಫರ್ ಷರೀಫ್ ಮೊಮ್ಮಗನಿಗೆ ಟಿಕೆಟ್ ನೀಡಲು ನಿರಾಕರಿಸಿದ್ದಕ್ಕೆ ರಾಜ್ಯದ ಉಸ್ತುವಾರಿ ಹೊತ್ತಿರುವ ಪೃಥ್ವಿರಾಜ ಚೌಹಾನ್ ಅವರ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ್ದರು.
ತಮ್ಮ ಪುತ್ರ ಹಾಗೂ ಜಾಫರ್ ಷರೀಫ್ ಅವರ ಮೊಮ್ಮಗ ದೇಶದ್ರೋಹಿಗಳಲ್ಲ, ಭಯೋತ್ಪಾದಕರೂ ಅಲ್ಲ, ಹಾಗಿದ್ದರೂ ಕೂಡಾ ಟಿಕೆಟ್ ನಿರಾಕರಣೆ ಮಾಡಿರುವುದು ಉದ್ದೇಶ ಪೂರ್ವಕವಾಗಿದೆ. ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದಿರುವುದು ಪಕ್ಷದ ಸೋಲಿಗೆ ಕಾರಣ ಎಂದು ಆರೋಪಿಸಿದ್ದರು. ಹಿರಿಯ ನಾಯಕಿಯಾಗಿರುವ ಮಾರ್ಗರೆಟ್ ಆಳ್ವ, ಪಕ್ಷದ ಆಂತರಿಕ ವಿಷಯವನ್ನು ಬಹಿರಂಗವಾಗಿ ಮಾತನಾಡಿರುವುದು ಅಕ್ಷಮ್ಯ ಎಂದು ಹೈಕಮಾಂಡ್ ಕೆಂಡಾಮಂಡಲವಾಗಿದೆ.
ಸಮಸ್ಯೆಗಳಿದ್ದರೆ
ಪಕ್ಷದೊಳಗೆ
ಬಗೆಹರಿಸಿಕೊಳ್ಳಬೇಕಿತ್ತು.
ಅದನ್ನು
ಬಿಟ್ಟು
ಮಾಧ್ಯಮದೆದುರು
ಮಾತನಾಡಿರುವುದು
ಸರಿಯಲ್ಲ.
ಪಕ್ಷದ
ಸಂವಿಧಾನವನ್ನು
ಸ್ಪಷ್ಟವಾಗಿ
ಉಲ್ಲಂಘಿಸಿರುವ
ಅವರ
ವಿರುದ್ದ
ಶಿಸ್ತು
ಕ್ರಮ
ಜರುಗಿಸಲು
ಚಿಂತನೆ
ನಡೆಸಲಾಗಿದೆ
ಎಂದು
ಮೂಲಗಳು
ತಿಳಿಸಿವೆ.
ಆರೋಪಗಳ
ಸಂಪೂರ್ಣ
ವಿವರವನ್ನು
ಪಡೆಯಲು
ಮಾಜಿ
ಮುಖ್ಯಮಂತ್ರಿ
ಸುಶೀಲ್
ಕುಮಾರ್
ಶಿಂಧೆ
ಅವರನ್ನೊಳಗೊಂಡು
ಸಮಿತಿ
ರಚಿಸಲಾಗಿದ್ದು,
ಮೂರು
ದಿನಗಳ
ಒಳಗೆ
ವರದಿ
ನೀಡುವಂತೆ
ಹೈಕಮಾಂಡ್
ಸೂಚನೆ
ನೀಡಿದೆ.
(ದಟ್ಸ್
ಕನ್ನಡ
ವಾರ್ತೆ)