ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣಿ : ವಾರಾಂತ್ಯದಲ್ಲಿ ಮಧ್ಯಂತರ ವರದಿ ಸಲ್ಲಿಕೆ

By Staff
|
Google Oneindia Kannada News

ಬೆಂಗಳೂರು, ನ. 6 : ರಾಜ್ಯದಲ್ಲಿ ನಡೆದಿರುವ ಗಣಿಗಾರಿಕೆ ಅವ್ಯವಹಾರಗಳ ಕುರಿತ ತನಿಖೆಯ ಮಧ್ಯಂತರ ವರದಿಯನ್ನು ಒಂದು ವಾರದೊಳಗೆ ಸರ್ಕಾರಕ್ಕೆ ಸಲ್ಲಿಸುವುದಾಗಿ ಲೋಕಾಯುಕ್ತ ನ್ಯಾಯಮೂರ್ತಿ ಎಂ.ಸಂತೋಷ ಹೆಗ್ಡೆ ತಿಳಿಸಿದ್ದಾರೆ.

ಸರ್ಕಾರದ ಹಿಂದಿನ ಆದೇಶದಂತೆ 2000ನೇ ಸಾಲಿನಿಂದ 2008ರವರೆಗೆ ನಡೆದಿರುವ ಗಣಿಗಾರಿಕೆ ಅವ್ಯವಹಾರಗಳ ಕುರಿತು ಈವರೆಗೆ ನಡೆದಿರುವ ತನಿಖೆಯ ವರದಿಯನ್ನು ಸರ್ಕಾರಕ್ಕೆ ನೀಡಲಾಗುವುದು. ಸುಮಾರು 500ಕ್ಕಿಂತಲೂ ಹೆಚ್ಚು ಪುಟಗಳುಳ್ಳ ವಿಸ್ತೃತ ವರದಿ ಶೀಘ್ರದಲ್ಲಿ ಸರ್ಕಾರದ ಕೈ ಸೇರಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆಯಾಗಿ ರಾಜ್ಯದಲ್ಲಿ ನಡೆದಿರುವ ಗಣಿಗಾರಿಕೆ ಅವ್ಯವಹಾರಗಳ ಬಗ್ಗೆ ವರದಿಯ ಮೊದಲ ಭಾಗದಲ್ಲಿ ವಿಸ್ತೃತವಾಗಿ ವಿವರಿಸಲಾಗಿದೆ. ಇಲ್ಲಿ ತನಿಖೆಯ ವಿವಿಧ ಹಂತಗಳನ್ನೂ ಉಲ್ಲೇಖಿಸಲಾಗಿದೆ. ಗಣಿಗಾರಿಕೆ ಸಂಪೂರ್ಣ ಚಿತ್ರಣವನ್ನು ನೀಡುವಂತ ವರದಿಯನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಿದರು. ಗಣಿ ಗುತ್ತಿಗೆ ನೀಡಿಕೆಯಲ್ಲಿ ನಡೆದಿರುವ ಅಕ್ರಮಗಳು, ಗುತ್ತಿಗೆ ಭೂಮಿಯ ಹೊರಗೆ ಗಣಿಗಾರಿಕೆ ನಡೆಸಿರುವುದು. ಅಕ್ರಮ ಅದಿರು ಸಾಗಾಣಿಕೆ, ನಿಯಮ ಮೀರಿ ಗಣಿಗಾರಿಕೆ ನಡೆದಿರುವ ಪರಿಣಾಮವಾಗಿ ಪರಿಸರ, ರಸ್ತೆ ಮತ್ತು ಜನ ಜೀವನದ ಮೇಲೆ ಉಂಟಾಗಿರುವ ಪರಿಣಾಮಗಳ ಬಗ್ಗೆ ವರದಿಯಲ್ಲಿ ವಿವರ ನೀಡಲಾಗಿದೆ. ಸಮಸ್ಯೆಗಳ ಪರಿಹಾರಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಶಿಫಾರಸ್ಸು ಮಾಡಲಾಗುವುದು ಎಂದು ಸಂತೋಷ ಹೆಗ್ಡೆ ತಿಳಿಸಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X