ಇಂಗ್ಲೆಂಡ್ ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟ
ನವದೆಹಲಿ, ನ. 6 : ಇದೇ 14 ರಿಂದ ಆರಂಭವಾಗಲಿರುವ ಇಂಗ್ಲೆಂಡ್ ಜೊತೆಗಿನ ಏಳು ಏಕದಿನ ಪಂದ್ಯಗಳ ಸರಣಿಯ ಮೊದಲ ಮೂರು ಪಂದ್ಯಗಳಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಸಚಿನ್ ತೆಂಡೂಲ್ಕರ್ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ತಮಿಳುನಾಡಿನ ಬ್ಯಾಟ್ಸ್ ಮನ್ ಮುರಳಿ ವಿಜಯ ಅವರಿಗೆ ಸ್ಥಾನ ನೀಡಲಾಗಿದೆ. ಚಾಲೆಂಜರ್ ಸೀರಿಸ್ ಹಾಗೂ ರಣಜಿ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರೂ ಕರ್ನಾಟಕದ ರಾಬಿನ್ ಉತ್ತಪ್ಪ ಅವರನ್ನು ಶ್ರೀಕಾಂತ್ ನೇತೃತ್ವದ ಆಯ್ಕೆ ಸಮಿತಿ ಕಡೆಗಾಣಿಸಿದೆ. ತಂಡ ಹೀಗಿದೆ:
*
ಮಹೇಂದ್ರ
ಸಿಂಗ್
ಧೋನಿ
(
ನಾಯಕ)
*
ವೀರೇಂದ್ರ
ಸೆಹ್ವಾಗ್
*
ಯುವರಾಜ್
ಸಿಂಗ್
*
ಗೌತಮ್
ಗಂಭೀರ್
*
ಮುರಳಿ
ವಿಜಯ್
*
ಸುರೇಶ್
ರೈನಾ
*
ರೋಹಿತ್
ಶರ್ಮ
*
ಯೂಸುಫ್
ಪಠಾಣ್
*
ಹರ್ಭಜನ
ಸಿಂಗ್
*
ಜಹೀರ್
ಖಾನ್
*
ಮುನಾಫ್
ಪಟೇಲ್
*
ಇಶಾಂತ್
ಶರ್ಮ
*
ಪ್ರಗ್ಯನ್
ಓಜಾ
*
ಆರ್
ಪಿ
ಸಿಂಗ್
*
ವಿರಾಟ್
ಕೊಹ್ಲಿ
ಪ್ರವಾಸಿ ಇಂಗ್ಲೆಂಡ್ ತಂಡ ಏಳು ಏಕದಿನ ಮತ್ತು ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಏಕದಿನ ಪಂದ್ಯಗಳು ನವೆಂಬರ್ 14, 17, 20, 23, 26 ಮತ್ತು 29 ರಂದು ಕ್ರಮವಾಗಿ ರಾಜಕೋಟ್, ಇಂದೋರ್, ಕಾನ್ಪುರ, ಬೆಂಗಳೂರು, ಕಟಕ್ ಮತ್ತು ಗುವಾಹಟಿಯಲ್ಲಿ ನಡೆಯಲಿದೆ. ಟೆಸ್ಟ್ ಪಂದ್ಯಗಳು ಡಿಸೆಂಬರ್ 11 - 15 ಅಹಮದಾಬಾದ್ ನಲ್ಲಿ, 19 - 23 ರಂದು ಮುಂಬೈಯಲ್ಲಿ ಆಡಲಾಗುತ್ತದೆ.
(ದಟ್ಸ್ ಕ್ರಿಕೆಟ್ ವಾರ್ತೆ)