ರಾಮನ ಮೇಲೆ ಆಣೆ ಮಾಡಲು ಜೆಡಿಎಸ್ ಆಗ್ರಹ
ಮೈಸೂರು, ನ. 5 : ಆಪರೇಷನ್ ಕಮಲ ಕಾರ್ಯಾಚರಣೆಯಲ್ಲಿ ಹಣ ಹೊಳೆ ಹರಿಸಿಲ್ಲ ಎಂದು ರಾಮನ ಮೇಲೆ ಆಣೆ ಮಾಡಿದರೆ ಸಾರ್ವಜನಿಕವಾಗಿ ಕ್ಷೇಮೆ ಕೇಳಲು ಸಿದ್ಧ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸರ್ಕಾರದ ಸವಾಲಿಗೆ ಪ್ರತಿ ಸವಾಲು ಹಾಕಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಧೈರ್ಯವಿದ್ದರೆ ಮುಖ್ಯಮಂತ್ರಿಯವರು ಸವಾಲನ್ನು ಸ್ವೀಕರಿಸಲಿ ಎಂದು ಕೆಣಕಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಹಣ ಬಲದಿಂದ ಗೆದ್ದಿದೆ ಎಂದು ಪ್ರತಿಪಕ್ಷಗಳು ಮಾಡಿರುವ ಆರೋಪ ಅಕ್ಷಮ್ಯ ಅಪರಾಧವಾಗಿದೆ. ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲದವರಿಂದ ಇಂತಹ ಹೇಳಿಕೆ ನಿರೀಕ್ಷಿಸಬಹುದಾಗಿದೆ. ಆದ್ದರಿಂದ ಈ ಬಗ್ಗೆ ಪ್ರತಿಪಕ್ಷಗಳ ಮುಖಂಡರು ಕ್ಷಮೆ ಕೋರಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗ್ರಹಿಸಿದ್ದಕ್ಕೆ ಕುಮಾರಸ್ವಾಮಿ ಈ ರೀತಿ ವ್ಯಾಖ್ಯಾನಿಸಿದ್ದಾರೆ.
ರಾಮನನ್ನು ಮಹೋನ್ನತ ದೇವರೆಂದು ಪೂಜಿಸುವ ಬಿಜೆಪಿಯವರಿಗೆ ಅವರ ಬಗ್ಗೆ ನಂಬಿಕೆ ಇದ್ದಲ್ಲಿ ಆಪರೇಷನ್ ಕಮಲದಲ್ಲಿ ವಿವಿಧ ಪಕ್ಷಗಳ ಮುಖಂಡರಿಗೆ ಅನೇಕ ಆಸೆ ಆಮಿಷಗಳನ್ನು ತೋರಿಸಿ ಬಿಜೆಪಿಗೆ ಸೆಳೆದುಕೊಂಡಿರುವುದು ಕನ್ನಡಿಯಷ್ಟೆ ಸತ್ಯ. ಪ್ರತಿಪಕ್ಷಗಳು ಮಾಡುತ್ತಿರುವ ಆಪಾದನೆ ಸುಳ್ಳಾಗಿದ್ದರೆ ರಾಮನ ಮೇಲೆ ಆಣೆ ಮಾಡಿದಲ್ಲಿ ಸಾರ್ವಜನಿಕವಾಗಿ ಕ್ಷಮೆ ಕೇಳುವುದಾಗಿ ಕುಮಾರಸ್ವಾಮಿ ಪ್ರತಿ ಸವಾಲು ಎಸೆದಿದ್ದಾರೆ.
(ದಟ್ಸ್
ಕನ್ನಡ
ವಾರ್ತೆ)
ಈಶ್ವರಪ್ಪ
ಜತೆ
ಜೆಡಿಎಸ್
ನ
ನಾಯಕರ
ಚರ್ಚೆ
ಜನವಿರೋಧಿ
ಸರ್ಕಾರಕ್ಕೆ
ಪಾಠ
ಕಲಿಸಿ
:
ಕುಮಾರಸ್ವಾಮಿ
ಕಾಂಗ್ರೆಸ್
ನ
ಆಪರೇಷನ್
ಹಸ್ತಕ್ಕೆ
ಬಿಜೆಪಿ
ಸ್ವಾಗತ
ಬಿಜೆಪಿ
ವಿರುದ್ಧ
ಕಾಂಗ್ರೆಸ್ನ
'ಆಪರೇಶನ್
ಹಸ್ತ'