ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೆದರಿಕೆ ಈಮೇಲ್ ರವಾನಿಸಿದ್ದ ವ್ಯಕ್ತಿ ಬಂಧನ
ಕೊಚ್ಚಿ, ಅ. 31 : ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಮತ್ತು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕೊಲೆ ಬೆದರಿಕೆ ಈ ಮೇಲ್ ರವಾನಿಸಿದ್ದ ಶಂಕಿತ ವ್ಯಕ್ತಿಯನ್ನು ಕೊಚ್ಚಿ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಅನಿಲ್ ಸೂರ್ಯ ಬಂಧಿತ ವ್ಯಕ್ತಿಯಾಗಿದ್ದು, ಸ್ಥಳೀಯ ಸೈಬರ್ ಕೇಂದ್ರದ ಮೂಲಕ ಬೆದರಿಕೆಯ ಈಮೇಲ್ ನ್ನು ರವಾನಿಸಿದ್ದ. ನ. 14 ರಂದು ಕೊಚ್ಚಿಯಲ್ಲಿ ನಡೆಯಲಿರುವ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಭಾಗವಹಿಸಬೇಕಿದೆ. ಅಲ್ಲಿ ಬಾಂಬ್ ಸ್ಫೋಟಿಸಲಾಗುವುದು ಎಂದು ಈಮೇಲ್ ನಲ್ಲಿ ಬರೆಯಲಾಗಿತ್ತು. ಅ. 24 ರಂದು ರಾಷ್ಟ್ರಪತಿ ಭವನಕ್ಕೆ ಇದೇ ಸೈಬರ್ ಕೇಂದ್ರದಿಂದ ಬೆದರಿಕೆಯ ಈಮೇಲ್ ಬಂದಿತ್ತು ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ. ಬಂಧಿತ ಅನಿಲ್ ಸೂರ್ಯ ಅವರನ್ನು ಕೊಚ್ಚಿ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ನ. 14 ರಂದು ಕೊಚ್ಚಿಯಲ್ಲಿ ಕಾಂಗ್ರೆಸ್ ಕಾರ್ಯಕ್ರಮ ನಡೆಯಲಿದೆ.
(ಏಜೆನ್ಸೀಸ್)
Comments
Story first published: Friday, October 31, 2008, 17:23 [IST]