ಕನ್ನಡ ನೆಲಕ್ಕೆ ಮೋಸ ಮಾಡಬೇಡಿ: ಸದಾನಂದಗೌಡ
ಮಡಿಕೇರಿ, ಅ. 31 : ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ದೆಹಲಿಗೆ ತೆರಳಲಿರುವ ಸರ್ವಪಕ್ಷಗಳ ನಿಯೋಗವನ್ನು ಪ್ರತಿಪಕ್ಷಗಳು ಬಹಿಷ್ಕರಿಸಿದಲ್ಲಿ ಅದು ಪ್ರಜಾಪ್ರಭುತ್ವಕ್ಕೆ ಅವಮಾನ ಎಸಗಿದಂತಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ. ಸದಾನಂದಗೌಡ ಆರೋಪಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ರಾಜ್ಯದ ಹಿತ ದೃಷ್ಟಿಯಿಂದ ಸ್ವಾರ್ಥ ರಾಜಕಾರಣವನ್ನು ಬದಿಗಿರಿಸಿ ನಿಯೋಗದೊಂದಿಗೆ ದೆಹಲಿಗೆ ತೆರಳಬೇಕು ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ಸಲಹೆ ನೀಡಿದರು. ಸಮಯ ಸಂದರ್ಭಗಳನ್ನು ನೋಡಿಕೊಂಡು ಪ್ರತಿಪಕ್ಷಗಳು ರಾಜಕೀಯ ಮಾಡಬೇಕು, ರಾಜ್ಯದ ಹಿತ ಬಂದಾಗ ನಮ್ಮಲ್ಲಿರುವ ವೈಷಮ್ಯವನ್ನು ಮರೆತು ಎಲ್ಲರೂ ಒಗ್ಗೋಡಬೇಕು ಎಂದು ಪ್ರತಿಪಕ್ಷಗಳಿಗೆ ತೀಕ್ಣವಾಗಿ ಪ್ರತಿಕ್ರಿಯಿಸಿದರು.
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆಯಬೇಕೆನ್ನುವುದು ಐದು ಕೋಟಿ ಕನ್ನಡಿಗರ ಕನಸು. ಅದು ನನಸಾಗಬೇಕಾದರೆ, ಜನಪ್ರತಿನಿಧಿಗಳು ಎಲ್ಲರೂ ಒಗ್ಗಟ್ಟಾಗಬೇಕು. ಆದ್ದರಿಂದ ದೆಹಲಿ ತೆರಳರುವ ಸರ್ವಪಕ್ಷಗಳ ನಿಯೋಗವನ್ನು ಬಹಿಷ್ಕಾರ ಮಾಡುವುದು ಸರಿಯಲ್ಲ. ಬಹಿಷ್ಕಾರ ಮಾಡಿದಲ್ಲಿ ಅದು ಕನ್ನಡಿಗರಿಗೆ, ಕನ್ನಡ ನೆಲೆಕ್ಕೆ ಮಾಡಿದ ದ್ರೋಹ ಎಂದು ಕಿಡಿಕಾರಿದರು. ಈಗಾಗಲೇ ಜನತೆ ತಕ್ಕ ಪಾಠ ಕಲಿಸಿದ್ದಾರೆ. ಅದನ್ನು ಗಮನದಲ್ಲಿರಿಸಿಕೊಂಡು ಕಾಂಗ್ರೆಸ್ , ಜೆಡಿಎಸ್ ನಾಯಕರು ಮುಂದಿನ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಎಂದು ಪ್ರತಿಪಕ್ಷದ ನಾಯಕರ ಕ್ರಮದ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದರು.
ಶಾಸ್ತ್ರೀಯ ಭಾಷೆ ಸಂಬಂದಿಸಿದಂತೆ ಬಿಜೆಪಿ ಸರ್ಕಾರ ಸರ್ವ ಪಕ್ಷ ದೆಹಲಿಗೆ ತೆರಳುವ ವಿಷಯದಲ್ಲಿ ರಾಜಕೀಯ ವಾಸನೆ ಬಡಿಯುತ್ತಿದೆ. ಈಗಾಗಲೇ ಈ ವಿಷಯ ಅಂತಿಮ ಹಂತಕ್ಕೆ ಬಂದಿದ್ದು, ಶೀಘ್ರದಲ್ಲಿ ಕನ್ನಡ ಮತ್ತು ತೆಲುಗು ಭಾಷೆಗೆ ಶಾಸ್ತೀಯ ಸ್ಥಾನಮಾನ ದೊರೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಇಂಥ ಸಂದರ್ಭದಲ್ಲಿ ಸರ್ವಪಕ್ಷ ನಿಯೋಗ ತೆಗೆದುಕೊಂಡು ಹೋಗುವುದು ಸರಿಯಲ್ಲ. ಇನ್ನು ಕೆಲ ದಿನಗಳ ಮಟ್ಟಿಗೆ ಕಾಯುವುದು ಸೂಕ್ತ ಎಂದು ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದರು. ನಿಯೋಗದ ಹಿಂದೆ ರಾಜಕೀಯ ಅಡಗಿರುವುದರಿಂದ ನಿಯೋಗದೊಂದಿಗೆ ಕಾಂಗ್ರೆಸ್ ಪಕ್ಷ ತೆರಳುವುದಿಲ್ಲ ಎಂದು ಅವರು ಹೇಳಿದ್ದರು. ಜೆಡಿಎಸ್ ವರಿಷ್ಠರು ಕೂಡಾ ಇದೇ ರಾಗವನ್ನು ಹಾಡಿದ್ದರು.
(ದಟ್ಸ್ ಕನ್ನಡ ವಾರ್ತೆ)
371ನೇ
ವಿಧಿ
ತಿದ್ದುಪಡಿಗೆ
ಕನ್ನಡ
ಸೇನೆ
ಆಗ್ರಹ
ಶಾಸ್ತ್ರೀಯ
ಸ್ಥಾನಮಾನ
:
ಸುಪ್ರಿಂಕೋರ್ಟ್
ಗೆ
ಮೊರೆ
ಮರೀಚಿಕೆಯಾಗುತ್ತಿರುವ
ಕನ್ನಡಕ್ಕೆ
ಶಾಸ್ತ್ರೀಯ
ಸ್ಥಾನ
ಕನ್ನಡ
ಭಾಷೆಗೆ
ಶಾಸ್ತ್ರೀಯ
ಗೌರವ
:
ಮುನ್ನಾನೋಟಗಳು