ಬಿಬಿಎಂಪಿ ಯೋಜನೆಗಳ ಮೇಲೆ ಸಿಎಂ ನಿಗಾ
ಬೆಂಗಳೂರು, ಅ: 27:ರಾಜ್ಯದ ರಾಜಧಾನಿ ಬೆಂಗಳೂರಿನ ಮೂಲಭೂತ ಸೌಲಭ್ಯಗಳ ಅಗತ್ಯ ಮತ್ತು ಅಭಿವೃದ್ಧಿಯತ್ತ ಕೈಗೊಳ್ಳಬೇಕಾದ ಕ್ರಮಗಳನ್ನು ಅರಿಯಲು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಪ್ರತಿ ತಿಂಗಳ ಎರಡು ಭಾನುವಾರ ನಗರ ಪ್ರದಕ್ಷಿಣೆ ನಡೆಸಲಿದ್ದಾರೆ.
ಹೊಸದಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಗೊಂಡ ನಗರದ ಹೊರ ವಲಯದ ಹೇರೋಹಳ್ಳಿಯಲ್ಲಿ ಭಾನುವಾರ ನಾಗರೀಕ ಸೌಲಭ್ಯಗಳ ಪರಿಶೀಲನೆ ನಡೆಸಿದ ನಂತರ ಸಾರ್ವಜನಿಕರೊಂದಿಗೆ ಮಾತನಾಡುತ್ತಾ ಅವರು ಈ ವಿಷಯವನ್ನು ಬಹಿರಂಗಗೊಳಿಸಿದರು.
ರಸ್ತೆ ಅಭಿವೃದ್ಧಿಪಡಿಸುವ, ಕುಡಿಯುವ ನೀರು ಒದಗಿಸುವ, ಒಳ ಚರಂಡಿ ವ್ಯವಸ್ಥೆ ಕಲ್ಪಿಸುವ, ಕಂದಾಯ ನಿವೇಶನದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಮನೆಗಳನ್ನು ಸಕ್ರಮಗೊಳಿಸುವ ಹತ್ತು ಹಲವು ವಿಷಯಗಳ ಬಗ್ಗೆ ಸರ್ಕಾರ ವಿಶೇಷ ಗಮನ ಹರಿಸಲಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಕೆರೆ ಅಭಿವೃದ್ಧಿ ಪ್ರಾಧಿಕಾರ ಸಧ್ಯದಲ್ಲಿಯೇ ಅನುಷ್ಠಾನಗೊಳಿಸಬೇಕಾದ ಕಾರ್ಯಕ್ರಮಗಳ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಕುರಿತ ರೂಪುರೇಷೆಗಳನ್ನು ಸಿದ್ಧಪಡಿಸಲಿದೆ. ಈ ನಿಟ್ಟಿನಲ್ಲಿ ಯಾವುದೇ ಭರವಸೆಗಳನ್ನು ನೀಡದೆ ಯೋಜನೆಗಳನ್ನು ಮಾತ್ರ ಪ್ರಾಮಾಣಿಕವಾಗಿ ಜಾರಿಗೊಳಿಸುವತ್ತ ಶ್ರಮಿಸುವುದಾಗಿ ಮುಖ್ಯಮಂತ್ರಿ ತಿಳಿಸಿದರು.
ಹೇರೋ
ಹಳ್ಳಿ
ಕೆರೆಯನ್ನು
ನಗರದ
ಸ್ಯಾಂಕಿ
ಕೆರೆ
ಮಾದರಿಯಲ್ಲಿ
ಅಭಿವೃದ್ಧಿಪಡಿಸಲಾಗುವುದು
ಎಂದು
ತಿಳಿಸಿದ
ಮುಖ್ಯಮಂತ್ರಿ
ನಂತರ
ಮಹದೇಶ್ವರನಗರ,
ಪ್ರಸನ್ನ
ಬಡಾವಣೆ,
ಅಂಜನಾನಗರ,
ಮುದ್ದಿನಪಾಳ್ಯ,
ಮಾರುತಿನಗರದ
ರಸ್ತೆಗಳ
ಸ್ಥಿತಿಗತಿಗಳನ್ನು
ಪರಿಶೀಲಿಸಿದರು.
ಬೃಹತ್
ಬೆಂಗಳೂರು
ಮಹಾನಗರ
ಪಾಲಿಕೆ
ಮತ್ತು
ಬೆಂಗಳೂರು
ಅಭಿವೃದ್ಧಿ
ಪ್ರಾಧಿಕಾರ
ಅನುಷ್ಠಾನಗೊಳಿಸುವ
ಯೋಜನೆಗಳು
ಹಾಗೂ
ಕಾಮಗಾರಿಗಳಲ್ಲಿ
ಗುಣಮಟ್ಟ
ಕಾಯ್ದುಕೊಳ್ಳಬೇಕು
ಎಂದು
ಮುಖ್ಯಮಂತ್ರಿ
ಆಶಿಸಿದರು.
ಸೊಣ್ಣೇನಹಳ್ಳಿ
ಹಾಗೂ
ಮಾರುತಿನಗರದ
ರಸ್ತೆ
ಕಾಮಗಾರಿಗಳಿಗೆ
ಟೆಂಡರ್
ಪ್ರಕ್ರಿಯೆ
ಈಗಾಗಲೇ
ಪೂರ್ಣಗೊಡಿದೆ.
ಕಾಮಗಾರಿಗಳನ್ನು
ಸಧ್ಯದಲ್ಲಿಯೇ
ಪ್ರಾರಂಭಿಸಲಾಗುವುದು
ಎಂದು
ಬೃಹತ್
ಬೆಂಗಳೂರು
ಮಹಾನಗರ
ಪಾಲಿಕೆಯ
ಆಯುಕ್ತ
ಡಾ
ಎಸ್.
ಸುಬ್ರಮಣ್ಯ
ಅವರು
ಮುಖ್ಯಮಂತ್ರಿಯವರ
ಸಮ್ಮುಖದಲ್ಲಿ
ಪ್ರಕಟಿಸಿದರು.
ನಂತರ,
ಕೆಂಗೇರಿ
ಉಪನಗರದ
ಹೊಸಕರೆಯಲ್ಲಿನ
ಒತ್ತುವರಿಯನ್ನು
ಮುಖ್ಯಮಂತ್ರಿ
ಪರಿಶೀಲಿಸಿದರು.
ಇದೇ
ಸಂದರ್ಭದಲ್ಲಿ
ಮಾಧ್ಯಮದವರೊಂದಿಗೆ
ಮಾತನಾಡಿದ,
ಬೆಂಗಳೂರು
ದಕ್ಷಿಣ
ವಿಭಾಗದ
ಜಿಲ್ಲಾ
ಉಸ್ತುವಾರಿ
ಸಚಿವರೂ
ಆದ
ಸಾರಿಗೆ
ಸಚಿವ
ಆರ್.
ಅಶೋಕ್
ಅವರು
ತಮ್ಮ
ವ್ಯಾಪ್ತಿಯಲ್ಲಿ
ಒತ್ತುವರಿಯಾಗಿರುವ
ರಾಜಾ
ಕಾಲುವೆಯೂ
ಸೇರಿದಂತೆ
ಯಾವುದೇ
ಕಾಲುವೆ
ಅಥವಾ
ಹೊಸಕೆರೆಯೂ
ಸೇರಿದಂತೆ
ಯಾವುದೇ
ಕರೆಯಲ್ಲಿ
ಒತ್ತುವರಿಯನ್ನು
ಕೂಡಲೇ
ತೆರವುಗೊಳಿಸಲಾವುದು.
ಅಂತೆಯೇ,
ಒತ್ತುವರಿ
ಮಾಡಿದವರ
ವಿರುದ್ಧ
ನಿರ್ದಾಕ್ಷಿಣ್ಯ
ಕ್ರಮ
ಕೈಗೊಳ್ಳಲಾಗುವುದು
ಎಂದರು.
ಮುಖ್ಯಮಂತ್ರಿಯವರ ನಗರ ಪ್ರದಕ್ಷಿಣೆ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವೆ ಕುಮಾರಿ ಶೋಭಾ ಕರಂದ್ಲಾಜೆ, ಬೆಂಗಳೂರು ಉತ್ತರ ವಿಭಾಗದ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಅಬಕಾರಿ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ವಾರ್ತಾ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು, ಬೆಂಗಳೂರು ಜಲ ಮಂಡಳಿಯ ಅಧ್ಯಕ್ಷ ಪಿ. ಬಿ. ರಾಮ ಮೂರ್ತಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷಸಿದ್ಧಯ್ಯ, ಕೇಂದ್ರ ಸ್ಥಾನಿಕ ಆರಕ್ಷಕ ಮಹಾ ನಿರೀಕ್ಷಕ ಸಿ. ಚಂದ್ರಶೇಖರ್, ವಾರ್ತಾ ಇಲಾಖೆಯ ನಿರ್ದೇಶಕಎನ್. ಆರ್. ವಿಶು ಕುಮಾರ್ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಎನ್. ನಾಯಕ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಬಿ. ಎ. ಮಹೇಶ್ ಅವರೂ ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದರು.