ಶೀಘ್ರವೇ 8 ಸಾವಿರ ಶಿಕ್ಷಕರ ನೇಮಕ : ಕಾಗೇರಿ
ಬೆಂಗಳೂರು, ಅ. 24 : ಮುಂದಿನ ಮೂರು ತಿಂಗಳಲ್ಲಿ ಒಂಬತ್ತು ಸಾವಿರ ಶಾಲಾ ಶಿಕ್ಷಕರನ್ನು ನೇಮಕ ಮಾಡಲು ಶೀಘ್ರದಲ್ಲಿ ಆದೇಶ ಹೊರಡಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಇಂದಿಲ್ಲಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ಷರ ದಾಸೋಹದ ಸಿಬ್ಬಂದಿಗಳ ಭತ್ಯೆಯನ್ನು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ ಎಂದರು. ರಾಜ್ಯದ ವಿವಿಧ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕ ಭರ್ತಿ ಮಾಡಲು ಸರ್ಕಾರ ಕ್ರಮಕೈಗೊಂಡಿದೆ. ಹಣಕಾಸು ಇಲಾಖೆಯ ಒಪ್ಪಿಗೆಯ ನಂತರ ಶಿಕ್ಷಣ ನೇಮಕಾತಿಗೆ ಚಾಲನೆ ನೀಡಲಾಗುವುದು. ಈ ಎಲ್ಲ ಪ್ರಕ್ರಿಯೆಗಳಿಗೆ ಮೂರು ತಿಂಗಳ ಬೇಕಾಗಿದೆ ಎಂದು ಹೇಳಿದರು.
ಐದು ಸಾವಿರ ಪ್ರಾಥಮಿಕ ಶಾಲೆ ಹಾಗೂ ಮೂರು ಸಾವಿರ ಪ್ರೌಢ ಶಾಲೆಯ ಶಿಕ್ಷಕರನ್ನು ನೇಮಕ ಮಾಡಲು ಸರ್ಕಾರ ನಿರ್ಧರಿಸಿದೆ. ಇದರ ಜೊತೆಗೆ ಅಕ್ಷರ ದಾಸೋಹ ಕಾರ್ಯಕ್ರಮದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಭತ್ಯೆಯನ್ನು ಹೆಚ್ಚಿಸಲು ಕ್ರಮಕೈಗೊಳ್ಳಲಾಗಿದ್ದು, ಮುಖ್ಯ ಅಡಿಗೆಯವರಿಗೆ ಈಗಿರುವ 600 ರು.ಗಳಿಂದ 800 ರು.ಗಳ ವರೆಗೆ, ಹಾಗೂ ಅಡಿಗೆ ಸಹಾಯಕರಿಗೆ 400 ರಿಂದ 500 ರು.ಗಳ ವರೆಗೆ ಏರಿಸಲಾಗಿದೆ ಎಂದು ಕಾಗೇರಿ ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)
ಮೈಸೂರು
:
ಕೊಳಚೆ
ಮುಕ್ತ
ನಗರಕ್ಕೆ
ಪಣ
:
ಶೋಭಾ
ಸಂಜೆ
ಹೊತ್ತು
ವಿದ್ಯುತ್
ಕಡಿತ
ಇಲ್ಲ:
ಈಶ್ವರಪ್ಪ