ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬರಲಿದೆ ಆಹಾಬರಲಿದೆ ನೀಲಿ ಹೂವಿನ ನೆರಳು

By Staff
|
Google Oneindia Kannada News

ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಅಂದಳು ವರ್ಣಿಕಾ.
ಬಳಸಿ ಬಳಸಿ ಹಳಸಲಾದ ಹಳೇ ಸಾಲು ಎಂದ ಯುಗಂಧರ.
ನೀನು ನನ್ನನ್ನು ನೋಡಿದಾಗ ಹೇಳಿದ ಆ ಮೂರು ಸಾಲುಗಳಿವೆಯಲ್ಲ. ಐ ಲವ್ ಯೂ. ಅದೂ ಇನ್ನೂ ಹಳಸಲು ಪದ .. ವರ್ಣಿಕಾಳ ಮಾತಲ್ಲಿ ವ್ಯಂಗ್ಯವಿತ್ತು.
ಪ್ರೀತಿಯಲ್ಲಿ ವ್ಯಂಗ್ಯ ಒಳ್ಳೇದಲ್ಲ ಯುಗಂಧರ ಸಿಟ್ಟಿನಿಂದಲೇ ಹೇಳಿದ.
ಗಂಡ ಹೆಂಡತಿ ಸಂಬಂಧದಲ್ಲಿ ಪ್ರೀತಿ ಕಣ್ಮರೆಯಾದ ಮೇಲೆ ಉಳಿಯೋದು ಒಂದೋ ಕಹಿಯಾದ ವ್ಯಂಗ್ಯ ಅಥವಾ ಒಗರು ವಿಷಾದ ಅಥವಾ ಹಸಿಹಸಿ ಪಶ್ಚಾತ್ತಾಪ. ಆದರೆ ನನಗೆ ಪಶ್ಚಾತ್ತಾಪಪಟ್ಟು ಅಭ್ಯಾಸ ಇಲ್ಲ. ವಿಷಾದಕ್ಕೆ ನೀನು ಅರ್ಹನಲ್ಲ. ವ್ಯಂಗ್ಯವೊಂದೇ ನಿನಗೆ ಸಲ್ಲುವಂಥದ್ದು ಎಂದು ವರ್ಣಿಕಾ ಎದ್ದು ಹೋದಳು.
ಯುಗಂಧರನಿಗೆ ಆ ಕ್ಷಣವೇ ಅವಳನ್ನು ಕೊಂದುಬಿಡಬೇಕು ಅನ್ನಿಸಿತು.
ಮರುಕ್ಷಣವೇ, ತಾನು ಸತ್ತುಹೋಗಿ ತಿಂಗಳುಗಳೇ ಕಳೆದಿವೆಯಲ್ಲ ಅಂತಲೂ ಅನ್ನಿಸಿತು.
ಅಂಥ ಭಾವದ ನಡುವೆಯೇ ಫೋನು ರಿಂಗಣಿಸಿತು.
ಸತ್ತವರಿಗೆ ಫೋನು ಬರುವುದಿಲ್ಲ !

ಏನಿದು?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X