ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದು ಮಾತಿಗೆ ಕಾಂಗ್ರೆಸ್ಸಿನಲ್ಲಿ ಬೆಲೆ ಇಲ್ಲ:ಖರ್ಗೆ

By Staff
|
Google Oneindia Kannada News

ಮಂಡ್ಯ, ಅ. 24 : ಮುಂಬರುವ ಉಪಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕುರಿತು ಸಿದ್ದರಾಮಯ್ಯ ನೀಡಿರುವ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಂದಾಣಿಕೆ ಕುರಿತು ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಅವರು ಪರೋಕ್ಷವಾಗಿ ಸಿದ್ದುಗೆ ಉತ್ತರಿಸಿದ್ದಾರೆ. ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುವ ವಿಷಯದಲ್ಲಿ ಪಕ್ಷದಲ್ಲಿ ಭಿನ್ನಾಭಿಪ್ರಾಯಗಳಿರುವುದು ನಿಜ. ಸಿದ್ದರಾಮಯ್ಯ ಮೈತ್ರಿ ವಿರೋಧಿಸುವವರಲ್ಲಿ ಮೊದಲಿಗರು ಎಂದ ಖರ್ಗೆ, ಸಿದ್ದರಾಮಯ್ಯ ಅವರ ವಿರೋಧ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ಹೇಳಿದರು. ಜೆಡಿಎಸ್ ಜೊತೆಗಿನ ಮೈತ್ರಿಗೆ ಸಂಬಂಧಿಸಿದಂತೆ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ಸಿದ್ಧರಾಮಯ್ಯ ಬಿಜೆಪಿ ಸಚಿವರೊಂದಿಗೆ ಸಭೆ ನಡೆಸಿರುವುದಕ್ಕೆ ಪ್ರತಿಕ್ರಿಯಿಸಿದ ಖರ್ಗೆ, ಪ್ರತಿ ಮನುಷ್ಯರಿಗೂ ಸ್ವಾತಂತ್ರವಿದೆ. ಬಿಜೆಪಿ ಸಚಿವರೊಂದಿಗೆ ಸಿದ್ದರಾಮಯ್ಯ ಮಾತುಕತೆ ಮಾಡಿರುವುದಕ್ಕೆ ಬೇರ ಅರ್ಥ ಕಲ್ಪಿಸುವುದು ಸರಿಯಲ್ಲ ಎಂದು ಹೇಳಿದರು. ಇಲ್ಲದ ಸುದ್ದಿಗಳಿಗೆ ಬಣ್ಣ ಬಳಿದು ವರದಿ ಮಾಡುವುದರಿಂದ ಪಕ್ಷಗಳು ಹಾಗೂ ನಾಯಕರ ಮಧ್ಯೆ ವೈಮಸ್ಸು ಉಂಟಾಗಲು ಕಾರಣವಾಗುತ್ತದೆ. ಆದ್ದರಿಂದ ಮಾಧ್ಯಮವದರು ಸಂಯಮದಿಂದ ವರದಿ ಮಾಡುವಂತೆ ಸಲಹೆ ನೀಡಿದರು.

ಅಧಿಕಾರದಲ್ಲಿರುವ ಸರ್ಕಾರ ಅನ್ಯ ಪಕ್ಷಗಳ ಶಾಸಕರನ್ನು ಸೆಳೆಯುವುದು ಹೊಸದೇನಲ್ಲ. ಆದರೆ ಪ್ರಧಾಪ್ರಭುತ್ವವನ್ನು ಗಾಳಿಗೆ ತೋರಿ ಬಿಜೆಪಿ ನಾಯಕರು ನಡೆಸಿರುವ ಆಪರೇಷನ್ ಕಮಲ ಸಂಪೂರ್ಣ ಜನವಿರೋಧಿ ಎಂದು ಖರ್ಗೆ ಕಿಡಿಕಾರಿದರು.

(ದಟ್ಸ್ ಕನ್ನಡ ವಾರ್ತೆ)

ಕಾಂಗ್ರೆಸ್ಸಿಗೆ ಜೆಡಿಎಸ್ಸಿನ ಹಂಗು ಬೇಕಿಲ್ಲ ;ಸಿದ್ದು
ಉಪಚುನಾವಣೆ ಮೈತ್ರಿಗೆ ತೀರ್ಮಾನಿಸಿಲ್ಲ ದೇಶಪಾಂಡೆ
ಮೈತ್ರಿ ಕುರಿತು ದೇಶಪಾಂಡೆ, ಕುಮಾರಸ್ವಾಮಿ ಚರ್ಚೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X