ಎಂಪಿ ಪ್ರಕಾಶ್ ನಿಷ್ಪ್ರಯೋಜಕ: ಜನಾರ್ದನರೆಡ್ಡಿ
ಬಳ್ಳಾರಿ, ಅ. 21 : ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ ನಬಾರ್ಡ್ ಹಾಗೂ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಭಾರಿ ಅವ್ಯವಹಾರ ಎಸಗಿದ್ದಾರೆ ಎಂದು ಪ್ರವಾಸೋಧ್ಯಮ ಸಚಿವ ಜನಾರ್ದನರೆಡ್ಡಿ ಆರೋಪಿಸಿದ್ದಾರೆ. ಸಾಹಿತಿಯೂ ಆಗಿರುವ ಎಂ.ಪಿ.ಪ್ರಕಾಶ ರಾಜಕೀಯ ವಲಯದಲ್ಲಿ ಸಜ್ಜನ ರಾಜಕಾರಣಿ ಎಂದೇ ಗುರುತಿಸಿಕೊಂಡವರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕಾಶ್ ಒಬ್ಬ ದುಷ್ಟ ರಾಜಕಾರಣಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜಕಾರಣದಲ್ಲಿ ಅನೇಕ ವರ್ಷಗಳ ಕಾಲ ಅಧಿಕಾರ ಅನುಭವಿಸಿದರೂ ಎಂದಿಗೂ ಜಿಲ್ಲೆಯ ಏಳ್ಗೆ ಕುರಿತು ಚಿಂತನೆ ನಡೆಸಲಿಲ್ಲ. ಅಭಿವೃದ್ಧಿಯ ಕುರಿತು ಚರ್ಚೆ ಮಾಡದ ಪ್ರಕಾಶ, ಇದೀಗ ಇಂಜಿನಿಯರಿಂಗ್ ಕಾಲೇಜಿನ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಬೀದಿಗಿಳಿದು ಹೋರಾಟ ಮಾಡುವುದಕ್ಕೆ ಯಾವುದೇ ನೈತಿಕ ಹಕ್ಕಿಲ್ಲ ಎಂದು ಲೇವಡಿ ಮಾಡಿದರು.
ಕಳೆದ ಸಮ್ಮಿಶ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದಾಗ ಹೂವಿನ ಹಡಗಲಿಗೆ ಇಂಜಿನಿಯರಿಂಗ್ ಕಾಲೇಜಿನ ಮಂಜೂರಿ ಮಾಡಿಸಿದೆ ಎಂದು ಪ್ರಕಾಶ್ ಕೊಚ್ಚಿಕೊಳ್ಳತ್ತಾರೆ ಅದೊಂದು ಶುದ್ಧ ಸುಳ್ಳು ಎಂದ ರೆಡ್ಡಿ, ಆಗ ಇಂಧನ ಸಚಿವರಾಗಿದ್ದ ಎಚ್.ಡಿ.ರೇವಣ್ಣ ಅವರ ಇಚ್ಛಾಶಕ್ತಿಯಿಂದ ಹೂವಿನ ಹಡಗಲಿಗೆ ಇಂಜಿನಿಯರಿಂಗ್ ಕಾಲೇಜು ಮಂಜೂರು ಆಗಿತ್ತೇ ಹೊರತು ಅದರಲ್ಲಿ ಪ್ರಕಾಶ ಅವರ ಶ್ರಮ ಏನೂ ಇಲ್ಲ ಎಂದು ವ್ಯಂಗ್ಯವಾಡಿದರು. ಇಷ್ಟಾದ್ದರೂ ಇಂಜಿನಿಯರಿಂಗ್ ಕಾಲೇಜು ಬಳ್ಳಾರಿ ಸ್ಥಳಾಂತರವಾಗಿದ್ದನ್ನು ವಿರೋಧಿಸಿ ಬಂದ್ ಕರೆ ನೀಡಲು ಅವರಿದೆ ಯಾವುದೇ ನೈತಿಕ ಹಕ್ಕಿಲ್ಲ ಎಂದು ಕಿಡಿಕಾರಿದ್ದಾರೆ. ಸರ್ಕಾರದ ವಿರುದ್ಧ ವಿನಾಕಾರಣ ಆರೋಪ ಮಾಡುವುದನ್ನು ನಿಲ್ಲಿಸಬೇಕು ಎಂದು ಅವರು ಕಿವಿ ಮಾತು ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಗಣಿಗಾಗಿ
ರಾಜ್ಯದ
ನಕ್ಷೆ
ತಿರುಚಿಲ್ಲ
:
ಜನಾರ್ದನರೆಡ್ಡಿ
ಹೂವಿನಹಡಗಲಿ
ಬಂದ್
ಗೆ
ಉತ್ತಮ
ಪ್ರತಿಕ್ರಿಯೆ