ಪ್ರತಿಪಕ್ಷಗಳು ಕಾಡುಪ್ರಾಣಿಗಳಲ್ಲ ಎಂದ ಬಿಎಸ್ ವೈ
ಬೆಂಗಳೂರು, ಅ.2: "ಸೆಪ್ಟೆಂಬರ್ 30 ರಂದು ಮೈಸೂರು ದಸರಾ ಉದ್ಘಾಟನೆ ಸಂದರ್ಭದ ತಮ್ಮ ಭಾಷಣವನ್ನು ತಪ್ಪಾಗಿ ಅರ್ಥೈಸಲಾಗಿದೆ" ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
"ಕಾಡುಪ್ರಾಣಿಗಳು ಕಾಡಿನಲ್ಲಿವೆ. ಕಾಡುವ ಪ್ರಾಣಿಗಳು ನಾಡಿನಲ್ಲಿವೆ" ಎಂಬ ನನ್ನ ಭಾಷಣದ ಮಾತು "ಸಮಾಜ ವಿರೋಧಿ ಶಕ್ತಿಗಳು ಹಾಗೂ ಭಯೋತ್ಪಾದಕರನ್ನು ಕುರಿತು ಹೇಳಿದ್ದೇ ಹೊರತು ವಿರೋಧ ಪಕ್ಷಗಳ ನಾಯಕರನ್ನು ಕುರಿತದ್ದಲ್ಲ" ಎಂದು ಮುಖ್ಯಮಂತ್ರಿಯವರು ತಿಳಿಸಿದ್ದಾರೆ.
ಮೂರು ದಶಕಗಳಿಗೂ ಅಧಿಕ ಕಾಲ ವಿರೋಧ ಪಕ್ಷದಲ್ಲಿ ದುಡಿದಿರುವ ಮತ್ತು ಜನಪರ ಹೋರಾಟದ ಹಿನ್ನೆಲೆಯಿಂದ ಬಂದಿರುವ ತಮಗೆ ವಿರೋಧಪಕ್ಷ ಹಾಗೂ ನಾಯಕರ ಬಗ್ಗೆ ಗೌರವವಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷದ ಪ್ರಾಧಾನ್ಯತೆಯ ಅರಿವಿದೆ. ಎಂದೂ ವ್ಯಕ್ತಿಗತ ನಿಂದೆಗೆ ಇಳಿದಿಲ್ಲ. ನನ್ನ ಭಾಷಣವನ್ನು ತಪ್ಪಾಗಿ ಗ್ರಹಿಸಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ದಸರಾಗೆ ಸಿದ್ದಗಂಗಾ ಶ್ರೀಗಳಿಂದ ಚಾಲನೆ
ಅಂದಿನ ಸಂಭ್ರಮಕ್ಕೆ ಸರಿಸಾಟಿಯಿಲ್ಲ












Click it and Unblock the Notifications