ಕುಮಾರಸ್ವಾಮಿ ವಿರುದ್ಧ ಈಶ್ವರಪ್ಪ ಮಾನನಷ್ಟ ವ್ಯಾಜ್ಯ
ಬೆಂಗಳೂರು, ಸೆ. 30 : ಈಜೀಪುರ ವಸತಿ ಸಮುಚ್ಚಯ ನಿರ್ಮಿಸುವ ಟೆಂಡರ್ ಗೆ ಸರ್ಕಾರ ಎಲ್ಲ ನೀತಿ ನಿಯಮಗಳನ್ನು ಗಾಳಿಗೆ ತೂರಿ ಮೇವರಿಕೆ ಹೋಲ್ಡಿಂಗ್ಸ್ ಎಂಬ ಸಂಸ್ಥೆ ಗೆನೀಡಿದೆ ಎನ್ನುವುದು ಶುದ್ಧ ಸುಳ್ಳು. ಈಜೀಪುರ ವಸತಿ ಸಮುಚ್ಚಯ ಟೆಂಡರ್ ಸೇರಿ ಒಟ್ಟು ಮೂರು ಪ್ರಕರಣಗಳನ್ನು ಲೋಕಾಯುಕ್ತ ತನಿಖೆ ಒಳಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಹಾಗೂ ಈಜೀಪುರ ಟೆಂಡರ್ ನಲ್ಲಿ ಮುಖ್ಯಮಂತ್ರಿಯವರಿಗೆ ಭಾರಿ ಉಡುಗೊರೆ ದೊರೆತಿದೆ ಎಂದು ಹೇಳಿಕೆ ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಲಾಗಿದೆ ಎಂದು ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಪಾರದರ್ಶಕವಾಗಿ ನಡೆದುಕೊಂಡಿದ್ದು ಎಂತಹ ತನಿಖೆಗೂ ಸಿದ್ಧ ಎಂದರು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡುತ್ತಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಹತಾಶೆ ಮನಸ್ಥಿತಿಯಿಂದ ಮಾತನಾಡುತ್ತಿರುವ ಕುಮಾರಸ್ವಾಮಿ ಎಚ್ಚರಿಕೆ ತಪ್ಪಬಾರದು ಎಂದು ಕಿವಿ ಮಾತು ಹೇಳಿದರು.
ಈಜೀಪುರ ವಸತಿ ಸಮುಚ್ಚಯ ಟೆಂಡರ್ ನಲ್ಲಿ ಭಾರಿ ಅವ್ಯವಹಾರವಾಗಿದೆ ಎಂದು ಪ್ರತಿಪಕ್ಷಗಳು ಟೀಕೆ ಮಾಡುತ್ತಿವೆ. ಲಂಚ ಹಗರಣ ನಡೆದಿದೆ ಎಂದು ಕೂಡಾ ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸತ್ಯಾಸತ್ಯತೆಯನ್ನು ತಿಳಿಯಲು ಪ್ರಕರಣವನ್ನು ಲೋಕಾಯುಕ್ತ ತನಿಖೆ ವಹಿಸಲಾಗುವುದು. ಹಾಗೆಯೇ ಬಿಜೆಪಿ ಜೆಡಿಎಸ್ ಸರ್ಕಾರದ ಅವಧಿಯಲ್ಲಿ ಹಾಸನದ ರಿಂಗ್ ರಸ್ತೆಯಲ್ಲಿ ನಡೆದಿರುವ ಅವ್ಯವಹಾರ ಹಾಗೂ ಲೋಕೋಪಯೋಗಿ, ಇಂಧನ ಇಲಾಖೆ ಸರ್ಕಾರ ನೀತಿ ನಿಮಗಳನ್ನು ಗಾಳಿಗೆ ತೂರಿ ನೇಮಕಾತಿ ಮಾಡಿರುವ ಪ್ರಕರಣವನ್ನು ಸಹ ಲೋಕಾಯುಕ್ತ ವಹಿಸಲು ನಿರ್ಧರಿಸಲಾಗಿದೆ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದರು.
ಜೆಡಿಎಸ್ ಬಿಜೆಪಿ ಸರ್ಕಾರದ ಅವಧಿಯಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಎಚ್.ಡಿ.ರೇವಣ್ಣ ಅವರು ಹಾಸನ ರಿಂಗ್ ರಸ್ತೆ ಕಾಮಗಾರಿಯಲ್ಲಿ ಭಾರಿ ಮುತುವರ್ಜಿ ವಹಿಸಿದ್ದರು. ಅಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎನ್ನುವ ಕೂಗು ಇದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಅದರ ತನಿಖೆಗೂ ವೇದಿಕೆ ಸಿದ್ಧಪಡಿಸಿದೆ ಎಂದು ಅವರು ತಿರುಗೇಟು ನೀಡಿದರು.
ಮಾನನಷ್ಟ
ಮೊಕದ್ದಮೆ
ಮುಖ್ಯಮಂತ್ರಿ
ಯಡಿಯೂರಪ್ಪ
ಮೇವರಿಕ್
ಸಂಸ್ಥೆಯಿಂದ
ಭಾರಿ
ಪ್ರಮಾಣದ
ಉಡುಗೊರೆ
ಪಡೆದು
ಈಜೀಪುರ
ವಸತಿ
ಸಮುಚ್ಚಯ
ಯೋಜನೆ
ಮಂಜೂರು
ಮಾಡಿದ್ದಾರೆ
ಎಂದು
ಮಾಜಿ
ಮುಖ್ಯಮಂತ್ರಿ
ಕುಮಾರಸ್ವಾಮಿ
ಮಾಡಿರುವ
ಆರೋಪ
ಮುಖ್ಯಮಂತ್ರಿ
ಯಡಿಯೂರಪ್ಪ
ಚಾರಿತ್ರ್ಯ
ವಧೆ
ಮಾಡುವ
ಹುನ್ನಾರ
ಎಂದು
ತೀವ್ರ
ಆಕ್ಷೇಪ
ವ್ಯಕ್ತಪಡಿಸಿದರು.
ಆದ್ದರಿಂದ
ಕುಮಾರಸ್ವಾಮಿ
ಮೇಲೆ
ಮಾನನಷ್ಟ
ಮೊಕದ್ದಮೆ
ಹೂಡಲು
ನಿರ್ಧರಿಸಲಾಗಿದೆ
ಎಂದು
ಈಶ್ವರಪ್ಪ
ಸ್ಪಷ್ಟಪಡಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)