ಬಸ್ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ
ಬೆಂಗಳೂರು, ಆ.30: ಏಕಾಏಕಿ ಬಸ್ ದರ ಏರಿಕೆ ಮಾಡಿರು ಬಿಜೆಪಿ ಸರ್ಕಾರದ ಕ್ರಮವನ್ನು ಖಂಡಿಸಿ ಸೆ. 2 ರಂದು ರಾಜ್ಯದಾದ್ಯಂತ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿರುವುದಾಗಿ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಬೆಲೆ ಏರಿಕೆ ಮಾಡುವುದಕ್ಕು ಒಂದು ಮಿತಿಯಿದೆ. ಕೆಎಸ್ಸಾರ್ಟಿಸಿ, ಬಿಎಂಟಿಸಿ ಬಸ್ ದರವನ್ನು ಶೇ.12 ರ ವರೆಗೂ ಹೆಚ್ಚು ಮಾಡಿರುವ ಕ್ರಮ ಸರಿಯಿಲ್ಲ. ಜನಸಾಮಾನ್ಯರ ಮೇಲೆ ಈ ರೀತಿಯ ಹೊರೆ ಹೇರುವುದು ಯಾವ ರೀತಿಯಿಂದಲೂ ಸರಿಯಿಲ್ಲ ಎಂದುಖರ್ಗೆ ಗುಡುಗಿದರು.
ಗೋಕರ್ಣ ದೇಗುಲ ಹಸ್ತಾಂತರ ವಿವಾದದ ಬಗ್ಗೆ ಪ್ರಶ್ನಿಸಿದಾಗ, ಕೋಪಗೊಂಡ ಖರ್ಗೆ ಅವರು, ಅದು ಜನವಿರೋಧಿ ಕ್ರಮ, ಸರ್ಕಾರ ಮಠಾಧಿಪತಿಗಳ ಅಡಿಯಾಳಾಗುತ್ತಿರುವುದು ಶೋಚನೀಯ ಎಂದು ಉತ್ತರಿಸಿದರು.
(ದಟ್ಸ್ ಕನ್ನಡವಾರ್ತೆ)
ಪೂರಕ ಓದಿಗೆ:
ಬಸ್ ದರ ಏರಿಕೆಗೆ ದೇವೇಗೌಡ ವಿರೋಧ
ಬಸ್ ದರ ಹೆಚ್ಚಳಕ್ಕೆ ಜಗ್ಗೇಶ್ ಸಮರ್ಥನೆ












Click it and Unblock the Notifications