ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಸ್ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ
ಬೆಂಗಳೂರು, ಆ.30: ಏಕಾಏಕಿ ಬಸ್ ದರ ಏರಿಕೆ ಮಾಡಿರು ಬಿಜೆಪಿ ಸರ್ಕಾರದ ಕ್ರಮವನ್ನು ಖಂಡಿಸಿ ಸೆ. 2 ರಂದು ರಾಜ್ಯದಾದ್ಯಂತ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿರುವುದಾಗಿ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಬೆಲೆ ಏರಿಕೆ ಮಾಡುವುದಕ್ಕು ಒಂದು ಮಿತಿಯಿದೆ. ಕೆಎಸ್ಸಾರ್ಟಿಸಿ, ಬಿಎಂಟಿಸಿ ಬಸ್ ದರವನ್ನು ಶೇ.12 ರ ವರೆಗೂ ಹೆಚ್ಚು ಮಾಡಿರುವ ಕ್ರಮ ಸರಿಯಿಲ್ಲ. ಜನಸಾಮಾನ್ಯರ ಮೇಲೆ ಈ ರೀತಿಯ ಹೊರೆ ಹೇರುವುದು ಯಾವ ರೀತಿಯಿಂದಲೂ ಸರಿಯಿಲ್ಲ ಎಂದುಖರ್ಗೆ ಗುಡುಗಿದರು.
ಗೋಕರ್ಣ ದೇಗುಲ ಹಸ್ತಾಂತರ ವಿವಾದದ ಬಗ್ಗೆ ಪ್ರಶ್ನಿಸಿದಾಗ, ಕೋಪಗೊಂಡ ಖರ್ಗೆ ಅವರು, ಅದು ಜನವಿರೋಧಿ ಕ್ರಮ, ಸರ್ಕಾರ ಮಠಾಧಿಪತಿಗಳ ಅಡಿಯಾಳಾಗುತ್ತಿರುವುದು ಶೋಚನೀಯ ಎಂದು ಉತ್ತರಿಸಿದರು.
(ದಟ್ಸ್
ಕನ್ನಡವಾರ್ತೆ)
ಪೂರಕ
ಓದಿಗೆ:
ಬಸ್
ದರ
ಏರಿಕೆಗೆ
ದೇವೇಗೌಡ
ವಿರೋಧ
ಬಸ್
ದರ
ಹೆಚ್ಚಳಕ್ಕೆ
ಜಗ್ಗೇಶ್
ಸಮರ್ಥನೆ
Comments
Story first published: Saturday, August 30, 2008, 16:47 [IST]