ಜಾರ್ಖಂಡ್: ಅತಂತ್ರವಾದ ಮಧು ಕೊಡಾ ಸರ್ಕಾರ
ರಾಂಚಿ, ಆ. 18 : ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಜಾರ್ಖಂಡ್ ಮುಕ್ತಿ ಮೋರ್ಚಾ ಹಿಂದಕ್ಕೆ ಪಡೆದಿದೆ. ಈ ಮೂಲಕ ಮಧು ಕೊಡಾ ನೇತೃತ್ವದ ಕಾಂಗ್ರೆಸ್ ಸರ್ಕಾರ ಭವಿಷ್ಯ ಡೋಲಾಯಮಾನ ಸ್ಥಿತಿಗೆ ಬಂದು ತಲುಪಿದೆ.
ಭಾನುವಾರ
ಶಿಬು
ಸೋರೆನ್
ಅಧ್ಯಕ್ಷತೆಯಲ್ಲಿ
ಸಭೆ
ಸೇರಿದ್ದ
ಜೆಎಂಎಂ
ಕಾರ್ಯಕಾರಿ
ಸಮಿತಿಯಲ್ಲಿ
ಈ
ತೀರ್ಮಾನಕ್ಕೆ
ಬರಲಾಗಿದ್ದು,
ಮಧು
ಕೊಡಾ
ನೇತೃತ್ವದ
ಕಾಂಗ್ರೆಸ್
ಸರ್ಕಾರಕ್ಕೆ
17
ಶಾಸಕರ
ಬೆಂಬಲವನ್ನು
ಹಿಂತೆಗೆದುಕೊಳ್ಳವುದಕ್ಕೆ
ಸಭೆಯಲ್ಲಿ
ಒಮ್ಮತ
ವ್ಯಕ್ತವಾಯಿತು.
ಇದರಿಂದಾಗಿ
ಸೋಮವಾರ
ಜೆಎಂಎಂ
ಮುಖಂಡ
ಶಿಬು
ಸೋರೆನ್
ಕಾಂಗ್ರೆಸ್
ಪಕ್ಷಕ್ಕೆ
ನೀಡಿರುವ
ಬೆಂಬಲವನ್ನು
ವಾಪಸ್ಸು
ಪಡೆಯುವ
ಕುರಿತ
ಪತ್ರವನ್ನು
ರಾಜ್ಯಪಾಲ
ಸಯ್ಯದ್
ಶಿಬ್ತೆ
ರಜಿ
ಅವರಿಗೆ
ಸಲ್ಲಿಸಿದರು.
ಇದರಿಂದ
ಮೂಲಕ
ಕಳೆದ
ಎರಡು
ತಿಂಗಳ
ಅವಧಿಯಲ್ಲಿ
ಕಾಂಗ್ರೆಸ್
ನೇತೃತ್ವದ
ಎರಡು
ಸರ್ಕಾರ
ಪತನಗೊಂಡಂತಾಗಿದೆ.
ಪರಮಾಣು
ಒಪ್ಪಂದದ
ಹಿನ್ನೆಲೆಯಲ್ಲಿ
ಉಂಟಾದ
ಬಿಕ್ಕಟ್ಟಿನಲ್ಲಿ
ಯುಪಿಎ
ಸರ್ಕಾರಕ್ಕೆ
ನೀಡಿದ್ದ
ಬೆಂಬಲವನ್ನು
ಎಡಪಕ್ಷಗಳು
ಹಿಂಪಡೆದಿದ್ದವು.
ಸಮಾಜವಾದಿ
ಪಕ್ಷ
ಯುಪಿಎ
ಸರ್ಕಾರಕ್ಕೆ
ಬೆಂಬಲ
ನೀಡಲು
ಮುಂದೆ
ಬಂದರೂ
ಕೂಡಾ
ಮ್ಯಾಜಿಕ್
ಸಂಖ್ಯೆಗೆ
ಕೊರತೆ
ಎದ್ದು
ಕಾಣುತ್ತಿತ್ತು.
ಆಗ
ಐದು
ಮಂದಿ
ಸಂಸದರನ್ನು
ಹೊಂದಿರುವ
ಜೆಎಂಎಂ
ಮುಖಂಡರಿಗೆ
ಹಲವು
ಶಱತ್ತುಗಳೊಂದಿಗೆ
ಯುಪಿಎಗೆ
ಬೆಂಬಲ
ನೀಡಲು
ಮುಂದಾದರು.
ಮುಖ್ಯವಾಗಿ ತಮ್ಮನ್ನು ಜಾರ್ಖಂಡ್ ಮುಖ್ಯಮಂತ್ರಿಯನ್ನಾಗಿಸಬೇಕು ಎಂದು ಶಿಬು ಸೋರೆನ್ ಬೇಡಿಕೆ ಮುಂದಿಟ್ಟಿದ್ದರು. ಇಲ್ಲವೇ ಕೇಂದ್ರದ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ತೀರ್ಮಾನ ಮಾಡಲಾಗಿತ್ತು. ಇದೀಗ ಶಿಬು ಸೋರೆನ್ ತಮಗೆ ಮುಖ್ಯಮಂತ್ರಿ ಸ್ಥಾನಬೇಕು ಎಂದು ಪಟ್ಟುಹಿಡಿದಿದ್ದಾರೆ. ಮಧು ಕೊಡಾ ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂದಕ್ಕೆ ಪಡೆಯಲು ನಿರ್ಧರಿಸಲಾಯಿತು ಎಂದು ಜೆಎಂಎಂ ಪಕ್ಷದ ಮೂಲಗಳು ತಿಳಿಸಿವೆ.
(ದಟ್ಸ್ ಕನ್ನಡ ವಾರ್ತೆ)
ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ : ಶಿಬು