ಪ್ರಜಾಪ್ರಭುತ್ವ ಬುಡಮೇಲು ಮಾಡಿದ ಕಾಂಗ್ರೆಸ್
ಅಗರ್ತಲಾ,
ಆ.
5
:
ಜು.
22
ರಂದು
ಪ್ರಧಾನಮಂತ್ರಿ
ಮನಮೋಹನ್
ಸಿಂಗ್
ನೇತೃತ್ವದ
ಯುಪಿಎ
ಸರ್ಕಾರ
ಕೋಟಿಗಟ್ಟಲೆ
ಹಣವನ್ನು
ಚೆಲ್ಲಿ
ವಿಶ್ವಾಸಮತದಲ್ಲಿ
ಗೆಲುವು
ಸಾಧಿಸಿತು.
ಈ
ಮೂಲಕ
ಪ್ರಜಾಪ್ರಭುತ್ವದ
ಮೂಲ
ಆಶಯವನ್ನು
ಕೊನೆಗಾಣಿಸಲು
ಶತಮಾನಗಳ
ಇತಿಹಾಸ
ಹೊಂದಿರುವ
ಕಾಂಗ್ರೆಸ್
ಪಕ್ಷವೇ
ಕೈಹಾಕಿರುವುದು
ನಾಚಿಕೆಗೇಡಿನ
ಸಂಗತಿ
ಸಿಪಿಐ(ಎಂ)
ಪ್ರದಾನ
ಕಾರ್ಯದರ್ಶಿ
ಪ್ರಕಾಶ್
ಕಾರಟ್
ಕೇಂದ್ರ
ಸರ್ಕಾರದ
ಮೇಲೆ
ತೀವ್ರ
ವಾಗ್ದಾಳಿ
ನಡೆಸಿದರು.
ತ್ರಿಪುರಾ
ನಗರದಲ್ಲಿ
ಮಂಗಳವಾರ
ಸಿಪಿಐ(ಎಂ)
ಏರ್ಪಡಿಸಿದ್ದ
ಮೂರು
ದಿನಗಳ
ರಾಜ್ಯ
ಮಟ್ಟದ
ವಿಚಾರ
ಸಂಕಿರಣದಲ್ಲಿ
ಭಾಗವಹಿಸಿ
ಮಾತನಾಡಿದ
ಅವರು,
ದುಡ್ಡಿನ
ಮೂಲಕ
ಏನನ್ನಾದರೂ
ಮಾಡಬಹುದು
ಎನ್ನುವುದಕ್ಕೆ
ಇದಕ್ಕಿಂತ
ಬೇರೆ
ಉದಾಹರಣೆ
ಇಲ್ಲ
ಎಂದು
ಆಕ್ರೋಶ
ವ್ಯಕ್ತಪಡಿಸಿದರು.
ಆ.1
ರಂದು
ವಿಯನ್ನಾದಲ್ಲಿ
ನಡೆದ
ಅಂತಾರಾಷ್ಟ್ರೀಯ
ಅಣುಶಕ್ತಿ
ಸಂಸ್ಥೆ
ಒಪ್ಪಂದ
ಪಡೆಯಲು
ಪ್ರಧಾನಮಂತ್ರಿಯವರು
ಏನೆಲ್ಲಾ
ಹರಸಾಹಸ
ಮಾಡಬೇಕಾಯಿತು
ಎನ್ನುವುದನ್ನು
ಸೂಕ್ತ
ಸಮಯದಲ್ಲಿ
ಬಹಿರಂಗಪಡಿಸುವೆ
ಎಂದ
ಅವರು,
ಅಮೆರಿಕದೊಂದಿಗಿನ
ಅಣು
ಒಪ್ಪಂದಕ್ಕೆ
ಸಹಿ
ಹಾಕುವ
ಈ
ಮೂಲಕ
ದೇಶದ
ಹಿತಾಸಕ್ತಿಯನ್ನು
ಪರದೇಶದವರಿಗೆ
ಒತ್ತೆಯಿಟ್ಟಿದ್ದಾರೆ
ಎಂದು
ಕಿಡಿಕಾರಿದರು.
ಅಮೆರಿಕದ
ಆಟಕ್ಕೆ
ಕುಣಿಯುತ್ತಿರುವ
ಕೇಂದ್ರ
ಸರ್ಕಾರಕ್ಕೆಮುಂದಿನ
ದಿನಗಳಲ್ಲಿ
ಅದರ
ಪರಿಣಾಮವೇನು
ಎನ್ನುವುದು
ತಿಳಿಯಲಿದೆ
ಎಂದು
ವ್ಯಂಗ್ಯವಾಡಿದರು.
ಅಮೆರಿಕದೊಂದಿಗಿನ ಒಪ್ಪಂದವನ್ನು ಯುಪಿಎ ಸರ್ಕಾರದಲ್ಲಿ ಅನೇಕರು ವಿರೋಧ ವ್ಯಕ್ತಪಡಿಸಿದರು, ಆದರೆ ಪ್ರಧಾನಮಂತ್ರಿ ಅವರ ಹಠದ ಮುಂದೆ ಎಲ್ಲರ ವಿರೋಧಗಳು ಗೌಣವಾದವು. ಅಣು ಒಪ್ಪಂದದಂತಹ ಅಂತಾರಾಷ್ಟ್ರೀಯ ವಿಷಯದಲ್ಲಿ ಕಾಂಗ್ರೆಸ್ ತಳೆದಿರುವ ಸರ್ವಾಧಿಕಾರ ಧೋರಣೆಯನ್ನು ಕಟುವಾಗಿ ಟೀಕಿಸಿದ ಅವರು, ಇದರ ವಿರುದ್ಧ ಎಡಪಕ್ಷಗಳು ಶೀಘ್ರದಲ್ಲಿ ದೇಶದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದು ಹೇಳಿದರು. ಜನವಿರೋಧಿ ಒಪ್ಪಂದಕ್ಕೆ ಸಹಿ ಹಾಕಿರುವ ಯುಪಿಎಗೆ ಮುಂದಿನ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಾರಟ್ ಎಚ್ಚರಿಕೆ ನೀಡಿದರು.
(ದಟ್ಸ್ ಕನ್ನಡ ವಾರ್ತೆ)
ಮಾಯಾವತಿ
ಪ್ರಧಾನಿ
ಅಭ್ಯರ್ಥಿ
ಅಲ್ಲ
ಎಂದ
ಕಾರಟ್
ಓಟಿಗೆ
ನೋಟು
ಪ್ರಕರಣದ
ಸಮಿತಿ
ಸಭೆ
ಲೋಕಸಭೆ
:
ಓಟಿಗೆ
ನೋಟು
ಪ್ರಕರಣ
ಸ್ಪೀಕರ್
ಮುಂದೆ