ಗುರುವಾರ ಸಚಿವ ಸಂಪುಟ ವಿಸ್ತರಣೆ ಸಂಭವ
ಬೆಂಗಳೂರು, ಜು. 9 : ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದಿಂದ ಕೆಲ ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೊಂಡಿರುವ ಹಿನ್ನಲೆಯಲ್ಲಿ ರಾಜ್ಯ ಸಚಿವ ಸಂಪುಟ ಗುರುವಾರ ವಿಸ್ತರಣೆಯಾಗುವ ನಿರೀಕ್ಷೆಯಿದೆ. ಅದರ ಜತೆಗೆ ಕೆಲ ಸಚಿವರ ಖಾತೆಗಳೂ ಬದಲಾವಣೆಯಾಗುವ ಸಂಭವವಿದೆ.
ಬಾಲಚಂದ್ರ ಜಾರಕಿಹೊಳೆ, ಶಿವನಗೌಡ ನಾಯಕ್ ಮತ್ತು ಆನಂದ ಅಸ್ನೋಟಿಕರ್ ಅವರಿಗೆ ಸಚಿವ ಸ್ಥಾನದ ಭಾಗ್ಯ ದೊರೆಯಲಿದೆ. ಜೆಡಿಎಸ್ ಶಾಸಕ ಉಮೇಶ್ ಕತ್ತಿ ಕೂಡಾ ಬಿಜೆಪಿ ಸೇರ್ಪಡೆಯಾಗುವುದು ಖಚಿತವಾಗಿರುವ ಹಿನ್ನಲೆಯಲ್ಲಿ ಅಸ್ನೋಟಿಕರ್ ಅವರ ಸಚಿವ ಸ್ಥಾನವನ್ನು ಉಮೇಶ್ ಕತ್ತಿ ವಹಿಸಿಕೊಳ್ಳಬಹುದು. ಅಸ್ನೋಟಿಕರ್ ಅವರಿಗೆ ನಿಗಮ ಮಂಡಳಿ ಸ್ಥಾನ ಸಿಗಲಿದೆ.
ದೊಡ್ಡಬಳ್ಳಾಪುರದ ಶಾಸಕ ಜೆ.ನರಸಿಂಹಸ್ವಾಮಿ ಅವರಿಗೆ ಕೊಳಚೆ ನಿರ್ಮೊಲನಾ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಮಂಗಳವಾರವೇ ಆದೇಶ ಹೊರಡಿಸಲಾಗಿದೆ. ಸಂಪುಟದಲ್ಲಿ ಮುಖ್ಯಮಂತ್ರಿ ಸೇರಿ 34 ಮಂದಿಗೆ ಅವಕಾಶವಿದೆ. ಈಗಾಗಲೇ 31 ಮಂದಿ ಸಚಿವರಾಗಿದ್ದು, ಗುರುವಾರ ರಾಜಭವನದಲ್ಲಿ ನಡೆಯುವ ಸರಳ ಸಮಾರಂಭದಲ್ಲಿ ಈ ಮೂವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಗಳಿವೆ.
ಮತ್ತೆ ಮೂವರು ಸಂಪುಟ ಸೇರ್ಪಡೆಗೊಳ್ಳುವ ಹಿನ್ನಲೆಯಲ್ಲಿ ಕೆಲ ಸಚಿವರ ಖಾತೆಗಳು ಬದಲಾವಣೆಯಾಗುವ ಸಂಭವವಿದೆ. ಮುಖ್ಯಮಂತ್ರಿಯವರು ತಮ್ಮ ಬಳಿ ಇಟ್ಟುಕೊಂಡಿರುವ ಗಣಿ, ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳನ್ನು ಹಂಚಿಕೆ ಮಾಡಲು ಯಡಿಯೂರಪ್ಪ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಜಗ್ಗೇಶ್
ಬಿಜೆಪಿಗೆ
ತುರುವೇಕೆರೆ
ಕಾಂಗ್ರೆಸ್
ಶಾಸಕ
ಹಾಗೂ
ಚಿತ್ರನಟ
ಜಗ್ಗೇಶ್
ಅವರೂ
ಬಿಜೆಪಿ
ಸೇರುವುದು
ಖಚಿತವಾಗಿದೆ.
ಕ್ಷೇತ್ರದ
ಅಭಿವೃದ್ಧಿ
ದೃಷ್ಟಿಯಿಂದ
ಬಿಜೆಪಿ
ಸೇರುವುದಾಗಿ
ಅವರು
ಈಗಾಗಲೇ
ಬಹಿರಂಗವಾಗಿ
ಹೇಳಿಕೆ
ನೀಡಿದ್ದಾರೆ.
ಆದರೆ
ತುರುವೇಕೆರೆ
ಕ್ಷೇತ್ರದಲ್ಲಿ
ಕಾಂಗ್ರೆಸ್
ಕಾರ್ಯಕರ್ತರಿಂದ
ಭಾರಿ
ವಿರೋಧ
ವ್ಯಕ್ತವಾಗಿದೆ.
ಆದರೆ
ಅದಕ್ಕೆ
ಜಗ್ಗದ
ಜಗ್ಗೇಶ್
ಕಾಂಗ್ರೆಸ್
ನಲ್ಲಿ
ಇರಲು
ಸಾಧ್ಯವಿಲ್ಲ
ಎಂದು
ಖಡಾಖಂಡಿತವಾಗಿ
ಹೇಳಿದ್ದಾರೆ.
ಒಂದು
ಮೂಲದ
ಪ್ರಕಾರ
ಜಗ್ಗೇಶ್
ಮುಂಬರುವ
ಲೋಕಸಭೆ
ಚುನಾವಣೆ
ಮೇಲೆ
ಕಣ್ಣಿಟ್ಟಿದ್ದು,
ತುಮಕೂರು
ಲೋಕಸಭೆ
ಕ್ಷೇತ್ರದಿಂದ
ಬಿಜೆಪಿ
ಅಭ್ಯರ್ಥಿಯಾಗಿ
ಕಣಕ್ಕಿಳಿಯಲು
ತಯಾರಿನಡೆಸಿದ್ದಾರೆ.
ಇತ್ತ
ಉಪಚುನಾವಣೆಯಲ್ಲಿ
ತುರುವೇಕೆರೆ
ಕ್ಷೇತ್ರದಿಂದ
ಜಗ್ಗೇಶ್
ಪತ್ನಿ
ಪರಿಮಳಾ
ಬಿಜೆಪಿಯಿಂದ
ಸ್ಪರ್ಧಿಸುವ
ಸಾಧ್ಯತೆಗಳಿವೆ.
(ದಟ್ಸ್ ಕನ್ನಡ ವಾರ್ತೆ)