ರಾಜ್ಯದಲ್ಲಿ ಎರಡು ಕೇಂದ್ರ ವಿವಿಗಳ ಸ್ಥಾಪನೆಗೆ ಅಸ್ತು
ಬೆಂಗಳೂರು, ಜು.8: ಕರ್ನಾಟಕದಲ್ಲಿ ಎರಡು ಕೇಂದ್ರ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಮಂಗಳವಾರ ತಿಳಿಸಿದ್ದಾರೆ.
ಶಿಕ್ಷಣ
ತಜ್ಞರು,
ಶಿಕ್ಷಕರು
ಹಾಗೂ
ಉನ್ನತ
ಶಿಕ್ಷಣ
ಸಂಸ್ಥೆಗಳ
ಮುಖ್ಯಸ್ಥರೊಂದಿಗಿನ
ಸಂವಾದ
ಕಾರ್ಯಕ್ರಮದಲ್ಲಿ
ಮಾತನಾಡುತ್ತಿದ್ದ
ಅವರು,
ಗುಲ್ಬರ್ಗ
ಹಾಗೂ
ಮೈಸೂರಿನಲ್ಲಿ
ಕೇಂದ್ರ
ವಿಶ್ವವಿದ್ಯಾಲಯಗಳನ್ನು
ಸ್ಥಾಪಿಸಲು
ಕೇಂದ್ರ
ಸರ್ಕಾರ
ನಿರ್ಧರಿಸಿದೆ
.
ದಕ್ಷಿಣ
ಭಾರತದ
ಉಳಿದ
ರಾಜ್ಯಗಳಲ್ಲಿ
ಕೇಂದ್ರ
ವಿಶ್ವವಿದ್ಯಾಲಯಗಳು
ಈಗಾಗಲೇ
ಕಾರ್ಯನಿರ್ವಹಿಸುತ್ತಿದ್ದು
ಕರ್ನಾಟಕದಲ್ಲಿ
ಇದೇ
ಮೊದಲ
ಬಾರಿಗೆ
ಕೇಂದ್ರ
ವಿಶ್ವವಿದ್ಯಾಲಯಗಳು
ಸ್ಥಾಪನೆಯಾಗಲಿವೆ
ಎಂದು
ಲಿಂಬಾವಳಿ
ಹರ್ಷ
ವ್ಯಕ್ತಪಡಿಸಿದರು.
ಸಂವಾದ
ಕಾರ್ಯಕ್ರಮದಲ್ಲಿ
ಭಾಗವಹಿಸಿದ
ಶಿಕ್ಷಣ
ತಜ್ಞರು
ಹಾಗೂ
ನಿಪುಣರು
ಈಗಿರುವ
ಶಿಕ್ಷಣ
ಪದ್ಧತಿಯ
ಲೋಪದೋಷಗಳ
ಬಗ್ಗೆ
ಚರ್ಚಿಸಿದರು.
ನಂತರ
ಮಾತನಾಡಿದ
ಸಚಿವರು
ಈಗಿರುವ
ಶಿಕ್ಷಣ
ಪದ್ಧತಿಯನ್ನು
ಅಮೂಲಾಗ್ರವಾಗಿ
ಬದಲಾಯಿಸಬೇಕಾಗಿದೆ
.
ಆ
ದಿಕ್ಕಿನಲ್ಲಿ
ಪ್ರಯತ್ನಿಸುವುದಾಗಿ
ಭರವಸೆ
ಕೊಟ್ಟರು.
ವಿಜ್ಞಾನ
ಹಾಗೂ
ಕಲಾ
ವಿಭಾಗಕ್ಕೆ
ಸೇರುವ
ವಿದ್ಯಾರ್ಥಿಗಳ
ಸಂಖ್ಯೆ
ಪ್ರತಿ
ವರ್ಷ
ಕಡಿಮೆಯಾಗುತ್ತಿದೆ.
ನಮ್ಮ
ಶಿಕ್ಷಣ
ಪದ್ಧತಿ
ಬದಲಾಗಲೇ
ಬೇಕಾಗಿದೆ.
ಇದರ
ಸಾದಕ
ಬಾಧಕಗಳನ್ನು
ತಿಳಿಯಲು
ನಿಪುಣರ
ಸಮಿತಿಯನ್ನು
ಸರ್ಕಾರ
ರಚಿಸಲಿರುವುದಾಗಿ
ಲಿಂಬಾವಳಿ
ತಿಳಿಸಿದರು.
ಉನ್ನತ ಶಿಕ್ಷಣದ ಮೌಲ್ಯಮಾಪನ ಮಾಡಲು ರಾಜ್ಯ ಮಟ್ಟದಲ್ಲಿ ಜ್ಞಾನ ಆಯೋಗ ನಿರ್ಮಿಸಿ ಅಗತ್ಯವಿದ್ದರೆ ಲೋಪದೋಷಗಳನ್ನು ಸರಿಪಡಿಸಲಾಗುತ್ತದೆ ಎಂದರು. ಸೆಮಿಸ್ಟರ್ ಸ್ಕೀಮ್ನ ಪರೀಕ್ಷೆ ಪದ್ಧತಿ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಇದನ್ನು ಸರಿಪಡಿಸಲು ತಜ್ಞರ ತಂಡವನ್ನು ರಚಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ತಿಳಿಸಲಾಗುತ್ತದೆ ಎಂದರು. ಶಿಕ್ಷಣ ತಜ್ಞರೊಂದಿಗಿನ ಇದೇ ರೀತಿಯ ಸಂವಾದ ಕಾರ್ಯಕ್ರಮಗಳನ್ನು ಮಂಗಳೂರು, ದಾವಣಗೆರೆ ಮತ್ತು ಗುಲ್ಬರ್ಗ ಜಿಲ್ಲೆಗಳಲ್ಲಿ ಆಯೋಜಿಸಿ ಶಿಕ್ಷಣ ತಜ್ಞರ ಸೂಚನೆ ಸಲಹೆಗಳನ್ನು ಉನ್ನತ ಶಿಕ್ಷಣದಲ್ಲಿ ಅಳವಡಿಸಿಕೊಳ್ಳಲಾಗುತ್ತದೆ ಎಂದು ಲಿಂಬಾವಳಿ ಹೇಳಿದರು.
(ದಟ್ಸ್ಕನ್ನಡ ವಾರ್ತೆ)