ಚುನಾವಣಾ ಭವಿಷ್ಯ ಹೇಳಿ 2 ಲಕ್ಷ ರು.ಗೆಲ್ಲಿ
ಮಂಗಳೂರು,ಮೇ 20: ಭವಿಷ್ಯ ಹೇಳುವವರಿಗೊಂದು ಸುವರ್ಣ ಅವಕಾಶ . ನೀವು ನೀಡಿದ ಭವಿಷ್ಯ ಸರಿಯಿದ್ದರೆ ಎರಡು ಲಕ್ಷ ರುಪಾಯಿಗಳ ಬಹುಮಾನ ನೀಡಲಾಗುವುದು. ಪ್ರಶ್ನೆಗಳು ಪ್ರಸ್ತುತ ಚುನಾವಣೆಗೆ ಸಂಬಂಧಿಸಿವೆ. ಸರಿ ಉತ್ತರ ನೀಡಿ, ಎರಡು ಲಕ್ಷ ರುಪಾಯಿಗಳನ್ನು ನಿಮ್ಮದಾಗಿಸಿಕೊಳ್ಳಿ.
ಅಖಿಲ ಭಾರತ ವಿಚಾರವಾದಿಗಳ ವೇದಿಕೆ ರಾಷ್ಟ್ರೀಯ ಅಧ್ಯಕ್ಷ ನರೇಂದ್ರ ನಾಯಕ್ ಈ ಸ್ಪರ್ಧೆಯ ರೂವಾರಿ. ಸ್ಪರ್ಧೆಯಲ್ಲಿ ಮುಖ್ಯವಾಗಿ ಪ್ರಸ್ತುತ ಚುನಾವಣೆಯಲ್ಲಿ ಯಾವ ಪಕ್ಷ ಎಷ್ಟು ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಎನ್ನುವುದನ್ನು ನಿಖರವಾಗಿ ಹೇಳಬೇಕು. (ಶೇ.5ರಷ್ಟು ಹೆಚ್ಚು ಕಡಿಮೆಯಾದರೂ ಪರವಾಗಿಲ್ಲ). ಮುಂದಿನ ಮುಖ್ಯಮಂತ್ರಿ ಯಾರು ? ಯಾವ ಪಕ್ಷದಿಂದ ಮುಖ್ಯಮಂತ್ರಿಯನ್ನು ಅಲಂಕರಿಸುತ್ತಾರೆ?
ಈ ಕ್ಷೇತ್ರಗಳಲ್ಲಿ ಯಾರು ಹೆಚ್ಚು ಮತಗಳನ್ನು ಗಳಿಸುತ್ತಾರೆ.(ಶಿಕಾರಿಪುರ-ಎಸ್.ಬಂಗಾರಪ್ಪ, ಬಿ.ಎಸ್.ಯಡಿಯೂರಪ್ಪ, ರಾಮನಗರ-ಎಚ್.ಡಿ.ಕುಮಾರಸ್ವಾಮಿ,ಮಮತಾ ನಿಚ್ಛಾನಿ, ಜೀವರ್ಗಿ-ಧರ್ಮಸಿಂಗ್, ರುದ್ರಪ್ಪಗೌಡ ಪಾಟೀಲ್, ವರುಣಾ-ಸಿದ್ಧರಾಮಯ್ಯ, ರೇವಣಸಿದ್ದಯ್ಯ, ಯಾದವಶೆಟ್ಟಿ- ಮಂಗಳೂರು- ಯಶವಂತಶೆಟ್ಟಿ, ಯೋಗೀಶ್ ಭಟ್ ಯಶವಂತ ಮರೋಳಿ- ಮಂಗಳೂರು ದಕ್ಷಿಣ, ಚಾಮರಾಜನಗರ-ವಾಟಾಳ್ ನಾಗರಾಜ್, ಶಕುಂತಳಾ ಶೆಟ್ಟಿ-ಪುತ್ತೂರು, ರಾಮನಾಥ್ ರೈ, ನಾಗರಾಜಶೆಟ್ಟಿ-ಬಂಟ್ವಾಳ)
ನಿಯಮಗಳು:
1)
ನಿಮ್ಮ
ಅನಿಸಿಕೆ
ಅಭಿಪ್ರಾಯಗಳನ್ನು
ಅಂಚೆ
ಅಥವಾ
ಕೊರಿಯರ್
ಮೂಲಕ
ಮತಎಣಿಕೆ
ಮುನ್ನಾ
ದಿನ
(ಮೇ24)
ಕಳಿಸಬೇಕು.
2)
ಒಬ್ಬ
ಭವಿಷ್ಯಕಾರನಿಗೆ
ಕೇವಲ
ಒಂದು
ಪತ್ರವನ್ನು
ಮಾತ್ರ
ಕಳಿಸಿಲು
ಅವಕಾಶ.
3)
ಪತ್ರದಲ್ಲಿ
ನಿಮ್ಮ
ಹೆಸರು,
ವಿಳಾಸ,
ಸಹಿ
ಇರಲೇಬೇಕು.
4)
ಆಯೋಜಕರಿಗೆ
ಈ
ಸ್ಪರ್ಧೆಯ
ಮೇಲೆ
ಸಂಪೂರ್ಣ
ನಿಯಂತ್ರಣವಿದೆ.
5)
ಒಂದಕ್ಕಿಂತ
ಹೆಚ್ಚಿನ
ಮಂದಿ
ಸರಿ
ಉತ್ತರ
ನೀಡಿದಲ್ಲಿ
ಬಹುಮಾನದ
ಹಣವನ್ನು
ಸಮಾನಾಗಿ
ಹಂಚಲಾಗುವುದು.
ಪತ್ರ
ಕಳಿಸಬೇಕಾದ
ವಿಳಾಸ
ನರೇಂದ್ರ
ನಾಯಕ
ಅಧ್ಯಕ್ಷರು,
ಅಖಿಲ
ಭಾರತ
ವಿಚಾರ
ವೇದಿಕೆ
ಒಕ್ಕೂಟ
ಮನೆ
ಸಂಖ್ಯೆ-13-9-1220/2,
ವಿಠೋಬಾ
ದೇವಸ್ಥಾನ
ರಸ್ತೆ
ಮಂಗಳೂರು
-575001
(ದಟ್ಸ್ ಕನ್ನಡ ವಾರ್ತೆ)