ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣಾ ಭವಿಷ್ಯ ಹೇಳಿ 2 ಲಕ್ಷ ರು.ಗೆಲ್ಲಿ

By Staff
|
Google Oneindia Kannada News

ಮಂಗಳೂರು,ಮೇ 20: ಭವಿಷ್ಯ ಹೇಳುವವರಿಗೊಂದು ಸುವರ್ಣ ಅವಕಾಶ . ನೀವು ನೀಡಿದ ಭವಿಷ್ಯ ಸರಿಯಿದ್ದರೆ ಎರಡು ಲಕ್ಷ ರುಪಾಯಿಗಳ ಬಹುಮಾನ ನೀಡಲಾಗುವುದು. ಪ್ರಶ್ನೆಗಳು ಪ್ರಸ್ತುತ ಚುನಾವಣೆಗೆ ಸಂಬಂಧಿಸಿವೆ. ಸರಿ ಉತ್ತರ ನೀಡಿ, ಎರಡು ಲಕ್ಷ ರುಪಾಯಿಗಳನ್ನು ನಿಮ್ಮದಾಗಿಸಿಕೊಳ್ಳಿ.

ಅಖಿಲ ಭಾರತ ವಿಚಾರವಾದಿಗಳ ವೇದಿಕೆ ರಾಷ್ಟ್ರೀಯ ಅಧ್ಯಕ್ಷ ನರೇಂದ್ರ ನಾಯಕ್ ಈ ಸ್ಪರ್ಧೆಯ ರೂವಾರಿ. ಸ್ಪರ್ಧೆಯಲ್ಲಿ ಮುಖ್ಯವಾಗಿ ಪ್ರಸ್ತುತ ಚುನಾವಣೆಯಲ್ಲಿ ಯಾವ ಪಕ್ಷ ಎಷ್ಟು ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಎನ್ನುವುದನ್ನು ನಿಖರವಾಗಿ ಹೇಳಬೇಕು. (ಶೇ.5ರಷ್ಟು ಹೆಚ್ಚು ಕಡಿಮೆಯಾದರೂ ಪರವಾಗಿಲ್ಲ). ಮುಂದಿನ ಮುಖ್ಯಮಂತ್ರಿ ಯಾರು ? ಯಾವ ಪಕ್ಷದಿಂದ ಮುಖ್ಯಮಂತ್ರಿಯನ್ನು ಅಲಂಕರಿಸುತ್ತಾರೆ?

ಈ ಕ್ಷೇತ್ರಗಳಲ್ಲಿ ಯಾರು ಹೆಚ್ಚು ಮತಗಳನ್ನು ಗಳಿಸುತ್ತಾರೆ.(ಶಿಕಾರಿಪುರ-ಎಸ್.ಬಂಗಾರಪ್ಪ, ಬಿ.ಎಸ್.ಯಡಿಯೂರಪ್ಪ, ರಾಮನಗರ-ಎಚ್.ಡಿ.ಕುಮಾರಸ್ವಾಮಿ,ಮಮತಾ ನಿಚ್ಛಾನಿ, ಜೀವರ್ಗಿ-ಧರ್ಮಸಿಂಗ್, ರುದ್ರಪ್ಪಗೌಡ ಪಾಟೀಲ್, ವರುಣಾ-ಸಿದ್ಧರಾಮಯ್ಯ, ರೇವಣಸಿದ್ದಯ್ಯ, ಯಾದವಶೆಟ್ಟಿ- ಮಂಗಳೂರು- ಯಶವಂತಶೆಟ್ಟಿ, ಯೋಗೀಶ್ ಭಟ್ ಯಶವಂತ ಮರೋಳಿ- ಮಂಗಳೂರು ದಕ್ಷಿಣ, ಚಾಮರಾಜನಗರ-ವಾಟಾಳ್ ನಾಗರಾಜ್, ಶಕುಂತಳಾ ಶೆಟ್ಟಿ-ಪುತ್ತೂರು, ರಾಮನಾಥ್ ರೈ, ನಾಗರಾಜಶೆಟ್ಟಿ-ಬಂಟ್ವಾಳ)

ನಿಯಮಗಳು:
1) ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಅಂಚೆ ಅಥವಾ ಕೊರಿಯರ್ ಮೂಲಕ ಮತಎಣಿಕೆ ಮುನ್ನಾ ದಿನ (ಮೇ24) ಕಳಿಸಬೇಕು.
2) ಒಬ್ಬ ಭವಿಷ್ಯಕಾರನಿಗೆ ಕೇವಲ ಒಂದು ಪತ್ರವನ್ನು ಮಾತ್ರ ಕಳಿಸಿಲು ಅವಕಾಶ.
3) ಪತ್ರದಲ್ಲಿ ನಿಮ್ಮ ಹೆಸರು, ವಿಳಾಸ, ಸಹಿ ಇರಲೇಬೇಕು.
4) ಆಯೋಜಕರಿಗೆ ಈ ಸ್ಪರ್ಧೆಯ ಮೇಲೆ ಸಂಪೂರ್ಣ ನಿಯಂತ್ರಣವಿದೆ.
5) ಒಂದಕ್ಕಿಂತ ಹೆಚ್ಚಿನ ಮಂದಿ ಸರಿ ಉತ್ತರ ನೀಡಿದಲ್ಲಿ ಬಹುಮಾನದ ಹಣವನ್ನು ಸಮಾನಾಗಿ ಹಂಚಲಾಗುವುದು.

ಪತ್ರ ಕಳಿಸಬೇಕಾದ ವಿಳಾಸ
ನರೇಂದ್ರ ನಾಯಕ
ಅಧ್ಯಕ್ಷರು, ಅಖಿಲ ಭಾರತ ವಿಚಾರ ವೇದಿಕೆ ಒಕ್ಕೂಟ
ಮನೆ ಸಂಖ್ಯೆ-13-9-1220/2, ವಿಠೋಬಾ ದೇವಸ್ಥಾನ ರಸ್ತೆ
ಮಂಗಳೂರು -575001

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X