ಕುಮಾರಸ್ವಾಮಿ ನನ್ನ ತಂದೆ ಸಮಾನ: ಸಚಿವ ಶ್ರೀರಾಮುಲು
ಬೆಂಗಳೂರು, ಸೆ.28 : ಅಧಿಕಾರ ಹಸ್ತಾಂತರಕ್ಕೆ ಇನ್ನು ಕೇವಲ ನಾಲ್ಕು ದಿನ ಬಾಕಿ ಇದೆ. ಆ ದಿನ ಹತ್ತಿರವಾಗುತ್ತಿದ್ದಂತೆ ಅಧಿಕಾರ ಹಸ್ತಾಂತರದ ಪ್ರಹಸನ ದಿನಕ್ಕೊಂದು ತಿರುವು ಪಡೆಯುತ್ತಿದೆ.
ಸಚಿವ ಶ್ರೀರಾಮುಲು, ವಿಧಾನ ಪರಿಷತ್ ಸದಸ್ಯ ಜನಾರ್ಧನ ರೆಡ್ಡಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಹೂಡಿರುವ ಕೇಸು, ಮಾಡಿರುವ ಆರೋಪ ವಾಪಸ್ ಪಡೆಯ ಬೇಕು. ಅವರು ಕದಡಿರುವ ರಾಜಕೀಯ ವಾತಾವರಣ ತಿಳಿಯಾಗುವವರೆಗೂ ಬಿಜೆಪಿಗೆ ಅಧಿಕಾರ ಹಸ್ತಾಂತರಿಸುವ ಪ್ರಶ್ನೆಯೇ ಇಲ್ಲ. ಎಂದು ದೇವೇಗೌಡರು ಗುಡುಗಿದ್ದಾರೆ.
ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ರಾಜ್ನಾಥ್ ಸಿಂಗ್ರೊಂದಿಗಿನ ಮಾತುಕತೆ ರದ್ದು ಪಡಿಸಿಕೊಂಡು ದಿಲ್ಲಿಯಿಂದ ದಿಢೀರನೆ ವಾಪಸಾದ ಗೌಡರು. ಗುರುವಾರ (ಸೆ.27) ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ ನಾಯಕರ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಅಕ್ಟೋಬರ್ 3ರ ನಂತರ ಸಮ್ಮಿಶ್ರ ಸರಕಾರ ಇರುತ್ತದೋ, ಕುಮಾರಸ್ವಾಮಿಯವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೋ ಎಂಬುದಕ್ಕೆ ಬಿಜೆಪಿ ನಾಯಕರೇ ಉತ್ತರಿಸಬೇಕು ಎಂದರು.
ಅ.3ರಂದು ನನ್ನ ನಿರ್ಧಾರ ಪ್ರಕಟಿಸಲಿದ್ದೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ. ಹಿರಿಯರು, ಮಠಾಧಿಪತಿಗಳು ಹೇಳಿರುವುದರಿಂದ ಸೆ.30ರವರೆಗೆ ಸುಮ್ಮನಿರುತ್ತೇನೆ. ಆನಂತರ ಹೇಳುವುದು ಬಹಳಷ್ಟಿದೆ ಎಂದು ಯಡಿಯೂರಪ್ಪ. , ಕುಮಾರಸ್ವಾಮಿ ನನ್ನ ತಂದೆಯ ಸಮಾನ. ಮಕ್ಕಳು ಮಾಡಿದ ತಪ್ಪನ್ನು ಮನ್ನಿಸಬೇಕು ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.
(ದಟ್ಸ್ಕನ್ನಡ ವಾರ್ತೆ)