6ತಿಂಗಳೊಳಗೆ ಎನ್ಜಿಇಎಫ್ಗೆ ಜೀವ ನೀಡಿ -ಹೈಕೋರ್ಟ್
ಬೆಂಗಳೂರು : ಎನ್ಜಿಇಎಫ್ ಕಾರ್ಖಾನೆ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ 6ತಿಂಗಳ ಗಡುವು ನೀಡಿದೆ.
ನ್ಯಾಯಮೂರ್ತಿ ರಾಮಮೋಹನರೆಡ್ಡಿ ಬುಧವಾರ(ಮಾಚ್ 28) ಈ ಕುರಿತು ವಿಚಾರಣೆ ನಡೆಸಿ, ರಾಜ್ಯ ಸರ್ಕಾರ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ, 6ತಿಂಗಳೊಳಗೆ ಪುನಶ್ಚೇತನ ಪ್ಯಾಕೇಜ್ಗೆ ಅನುಮೋದನೆ ಪಡೆಯಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಹಿನ್ನೆಲೆ : ಎನ್ಜಿಇಎಫ್ ನಷ್ಟದಲ್ಲಿರುವ ಘಟಕ ಎಂದು ಘೋಷಿತವಾದ ನಂತರ, ಕಂಪನಿಯನ್ನು ಸ್ಥಗಿತಗೊಳಿಸಬೇಕೆಂದು ನಿರ್ಧರಿಸಲಾಗಿತ್ತು. ಈ ನಿಟ್ಟಿನಲ್ಲಿ ಹರಾಜು ಕೂಡ ಹಾಕಲಾಗಿತ್ತು. ಆದರೆ ಕಾರ್ಮಿಕರ ಹಿತದೃಷ್ಟಿಯಿಂದ ಕಂಪನಿಯನ್ನು ಪುನಶ್ಚೇತನಗೊಳಿಸಲು ಸರ್ಕಾರ ಹೊಸ ನಿರ್ಧಾರಕ್ಕೆ ಬಂದಿತ್ತು.
ಈ ಸಂಬಂಧ ಪುನಶ್ಚೇತನ ಪ್ಯಾಕೇಜ್ ಕೂಡ ಸಿದ್ಧಪಡಿಸಲಾಗಿತ್ತು. ಆದರೆ ಕಾನೂನು ಪ್ರಕಾರ ಇದು ಕೇಂದ್ರ ಸರ್ಕಾರದ ಅನುಮೋದನೆಗೊಳಪಡಬೇಕು. ಕೇಂದ್ರದಿಂದ ಅನುಮೋದನೆ ಪಡೆಯಲು ಕಾಲಾವಕಾಶ ನೀಡಬೇಕೆಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು.
(ದಟ್ಸ್ ಕನ್ನಡ ವಾರ್ತೆ)