ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಉತ್ತರ ಕರ್ನಾಟಕದಲ್ಲಿ ರಂಗಾಯಣದ ‘ರಂಗಯಾತ್ರೆ’
ರಾಯಚೂರು : ಸುವರ್ಣ ಕರ್ನಾಟಕ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ , ಮೈಸೂರಿನ ರಂಗಾಯಣ ನಾಟಕ ತಂಡ ರಂಗಯಾತ್ರೆ ಹಮ್ಮಿಗೊಂಡಿದೆ.
ಬಳ್ಳಾರಿ, ಬೀದರ್, ಗುಲ್ಬರ್ಗ, ರಾಯಚೂರು, ಬೆಳಗಾವಿ, ಧಾರವಾಡ ಹಾಗೂ ಬಿಜಾಪುರ ಸೇರಿದಂತೆ ವಿವಿಧೆಡೆ ರಂಗಯಾತ್ರೆ ಸಾಗಲಿದೆ.
ರಾಯಚೂರಿನಲ್ಲಿ ರಂಗಯಾತ್ರೆ ಹಿನ್ನೆಲೆ ಪ್ರದರ್ಶನಗೊಳ್ಳಲಿರುವ ನಾಟಕಗಳು :
- ಫೆಬ್ರವರಿ 12ರಂದು ರಾಯಚೂರಿನಲ್ಲಿ ಖ್ಯಾತ ರಂಗಕರ್ಮಿ ಪ್ರಸನ್ನ ಅವರ ನಿರ್ದೇಶನದ ‘ಪುಗಳೆಂದಿ ಪ್ರಹಸನ’ ಪ್ರದರ್ಶನ.
- ಫೆಬ್ರವರಿ 13ರಂದು ಇವಿಲಿನ್ ಪುಲೆನ್ಸೆ ನಿರ್ದೇಶನದ ‘ಕಥೆಗಳ ಕಣಜ’ ಹಾಗೂ ಇಕ್ಬಾಲ್ ಅಹಮದ್ ನಿರ್ದೇಶನದ ‘ಪೋಲಿಕಿಟ್ಟಿ ’ನಾಟಕದ ಪ್ರದರ್ಶನ.
- ಬಹುರೂಲ್ ಇಸ್ಲಾಂ ನಿರ್ದೇಶನದ ‘ಸೀಗಲ್’ ನಾಟಕ ಫೆಬ್ರವರಿ 14ರಂದು ಪ್ರದರ್ಶನ.
- ಜಿಲ್ಲಾ ಅಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಪಂಡಿತ್ ಸಿದ್ದಾರಾಮ ಜಂಬಲ್ದಿನ್ನಿ ರಂಗಮಂದಿರದಲ್ಲಿ ಎಲ್ಲಾ ನಾಟಕಗಳು ಪ್ರದರ್ಶನಗೊಳ್ಳಲಿವೆ.
Story first published: Friday, February 9, 2007, 5:30 [IST]