ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದಿನವರ್ಷ ಚಂದ್ರಮಂಚ ಏರಲು ಇಸ್ರೋ ಸಿದ್ಧತೆ

By Staff
|
Google Oneindia Kannada News

ಕಾನ್ಪುರ : ಭಾರತದ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನಕ್ಕೆ ಮಹೂರ್ತ ನಿಗದಿಯಾಗಿದೆ.

2008ರ ಮಾರ್ಚ್‌ 30ರಂದು ಶ್ರೀ ಹರಿಕೋಟಾದಿಂದ, ಪಿಎಸ್‌ಎಲ್‌ವಿ ಗಗನನೌಕೆ ಮೂಲಕ ಚಂದ್ರಯಾನ ಸಾಕಾರಗೊಳ್ಳಲಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ(ಇಸ್ರೋ)ವು ಚಂದ್ರಯಾನ-1 ಯೋಜನೆಗೆ ಬೇಕಾದ ಸಕಲ ಸಿದ್ದತೆಯನ್ನು ಪೂರ್ಣಗೊಳಿಸಿದೆ.

ಚಂದ್ರಯಾನದ ನಂತರ ಬಾಹ್ಯಾಕಾಶ ಕೇಂದ್ರ ಸ್ಥಾಪನೆ, ಭಾರತದ ಮುಂದಿನ ಗುರಿ ಎಂದು ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ವಿಜ್ಞಾನ ಕೇಂದ್ರದ ಸಹ ಪ್ರಾಧ್ಯಾಪಕ ಟಿ.ವಿ. ಅದಿಮೂರ್ತಿ ತಿಳಿಸಿದ್ದಾರೆ. ಕಾನ್ಪುರದ ಐಐಟಿಯಲ್ಲಿ ನಡೆದಿರುವ ವಿದ್ಯಾರ್ಥಿಗಳ ಕಾರ್ಯಾಗಾರದಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿದ್ದಾರೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X