ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸುವರ್ಣ ಕರ್ನಾಟಕ : ವೀರೇಂದ್ರ ಹೆಗ್ಗಡೆ ಕಲ್ಪನೆಯಲ್ಲಿ...
ಉಡುಪಿ : ಆಲ್ಕೋಹಾಲ್ನಿಂದ ಸಂಪೂರ್ಣವಾಗಿ ರಾಜ್ಯ ಮುಕ್ತವಾದಾಗ ಮಾತ್ರ, ಸುವರ್ಣ ಕರ್ನಾಟಕ ಆಚರಣೆಗೆ ನಿಜ ಅರ್ಥ ಬರುತ್ತದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಚಿಂತನೆ ನಡೆಸಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟಿದ್ದಾರೆ.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಒಂದು ಭಾಗವಾದ ಜನಜಾಗೃತಿ ವೇದಿಕೆ ಹಮ್ಮಿಕೊಂಡಿದ್ದ, ಜಿಲ್ಲಾ ಮಟ್ಟದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಮದ್ಯಪಾನವನ್ನು ತ್ಯಜಿಸುವ ಮೂಲಕ ಗ್ರಾಮೀಣರು ಸುವರ್ಣ ಕರ್ನಾಟಕದ ಸಂಭ್ರಮವನ್ನು ಹಂಚಿಕೊಳ್ಳಬೇಕು. ಗಾಂಧಿ ಕಂಡ ಸರ್ವೋದಯ ಮತ್ತು ಗ್ರಾಮೋದಯದ ಕನಸನ್ನು ನನಸು ಮಾಡಲು ಯುವ ಮನಸ್ಸುಗಳು ಮುಂದಾಗಬೇಕು ಎಂದು ವೀರೇಂದ್ರ ಹೆಗ್ಗಡೆ ಕರೆ ನೀಡಿದರು.
(ದಟ್ಸ್ ಕನ್ನಡ ವಾರ್ತೆ)
Story first published: Friday, November 3, 2006, 23:53 [IST]