ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯಾಯಾಂಗ ಬಂಧನಕ್ಕೆ ‘ಕ್ರೆೃಮ್‌ಸ್ಟೋರಿ’ ಕಾಕತ್ಕರ್‌

By Staff
|
Google Oneindia Kannada News

ನ್ಯಾಯಾಂಗ ಬಂಧನಕ್ಕೆ ‘ಕ್ರೆೃಮ್‌ಸ್ಟೋರಿ’ ಕಾಕತ್ಕರ್‌
ಗುಂಡು ಹಾರಿಸಿದ್ದು, ಕೊಲ್ಲುವುದಕ್ಕಲ್ಲ -ಬಾಲಕೃಷ್ಣ ಕಾಕತ್ಕರ್‌ ಸ್ಪಷ್ಟನೆ

ಬೆಂಗಳೂರು : ಕಾರು ಚಾಲಕನ ಮೇಲೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪತ್ರಕರ್ತ ಬಾಲಕೃಷ್ಣ ಕಾಕತ್ಕರ್‌ ಅವರನ್ನು ಡಿ.9ರವರೆಗೆ ನ್ಯಾಯಾಂಗ ಬಂಧನದಲ್ಲಿಡಲು ನ್ಯಾಯಾಲಯ ಆದೇಶಿಸಿದೆ.

ಉದಯ ಟೀವಿಯ ‘ಕ್ರೆೃಮ್‌ ಸ್ಟೋರಿ’ ಮೂಲಕ ಜನಪ್ರಿಯರಾಗಿರುವ ಕಾಕತ್ಕರ್‌, ತಮ್ಮ ಕಾರಿನ ಚಾಲಕ ವೀರೇಶ್‌ ಮೇಲೆ ಗುಂಡುಹಾರಿಸಿದ್ದಾರೆ. ಅವರ ವಿರುದ್ಧ ಜ್ಞಾನಭಾರತಿ ಪೋಲಿಸ್‌ ಠಾಣೆಯಲ್ಲಿ ಕೊಲೆಯತ್ನದ ಪ್ರಕರಣ ದಾಖಲಾಗಿದೆ.

ವೀರೇಶ್‌ನನ್ನು ಇತ್ತೀಚೆಗಷ್ಟೇ ಕಾಕತ್ಕರ್‌ ಕೆಲಸದಿಂದ ತೆಗೆದು ಹಾಕಿದ್ದರು ಎನ್ನಲಾಗಿದೆ.

ಈ ಬಗ್ಗೆ ಕಾಕತ್ಕರ್‌ ಹೇಳೋದು ಇಷ್ಟು : ‘ಸೆಕ್ಯೂರಿಟಿ ಗಾರ್ಡ್‌ ಮೇಲೆ ಹಲ್ಲೆ ನಡೆಸಿದ ನನ್ನ ಕಾರು ಚಾಲಕ ವೀರೇಶ್‌ ಸೇರಿದಂತೆ ನಾಲ್ವರು, ನಾಗರಬಾವಿಯಲ್ಲಿರುವ ನಮ್ಮ ಮನೆಗೆ ಗುರುವಾರ ರಾತ್ರಿ ನುಗ್ಗಲು ಯತ್ನಿಸಿದರು. ಈ ಸಂದರ್ಭದಲ್ಲಿ ಬೆದರಿಸಲು ಗಾಳಿಯಲ್ಲಿ ಗುಂಡು ಹಾರಿಸಿದಾಗ, ಆಕಸ್ಮಿಕವಾಗಿ ವೀರೇಶ್‌ಗೆ ಗುಂಡು ತಗುಲಿದೆ. ನಂತರ ನಾನೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದೇನೆ... ’

ಆದರೆ ವೀರೇಶ್‌ ಪೋಲಿಸರಿಗೆ ಹೇಳಿರುವುದು ಇಷ್ಟು : ‘ಅಂದು ನಾನು ಮತ್ತು ನನ್ನ ಗೆಳೆಯರು ಕಾಕತ್ಕರ್‌ ಜೊತೆ ಮಾತನಾಡುತ್ತಿದ್ದೆವು. ಏಕಾಏಕಿ ತಮ್ಮ ಪಿಸ್ತೂಲಿನಿಂದ ಗುಂಡು ಹಾರಿಸಿ, ನಮ್ಮನ್ನು ಕೊಲ್ಲಲು ಯತ್ನಿಸಿದ್ದಾರೆ...’

ಯಾವುದು ಸತ್ಯ? ಯಾವುದು ಮಿಥ್ಯ? ‘ಕ್ರೆೃಮ್‌ ಡೈರಿ’ಯಲ್ಲಿ ತಿಳಿಯುವುದೇ?

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X