ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂಪಾ ಅಧ್ಯಕ್ಷತೆಯ ಕ.ಸಾ.ಪ ಸಭೆಯಲ್ಲಿ ಭಾರೀ ರಂಪ

By Staff
|
Google Oneindia Kannada News

ಚಂಪಾ ಅಧ್ಯಕ್ಷತೆಯ ಕ.ಸಾ.ಪ ಸಭೆಯಲ್ಲಿ ಭಾರೀ ರಂಪ
ಪರಿಷತ್ತಿನ ಕೇಂದ್ರ ಸಮಿತಿಯ ಅಧಿಕಾರವಧಿ ಹೆಚ್ಚಳಕ್ಕೆ ತೀವ್ರ ವಿರೋಧ

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವ ಸದಸ್ಯರ ಸಭೆ ಗೊಂದಲದ ಗೂಡಾಗಿ, ಯಾವುದೇ ತೀರ್ಮಾನಗಳಿಲ್ಲದೇ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ.

ಸಾಹಿತ್ಯಪರಿಷತ್ತಿನ ಕೇಂದ್ರ ಸಮಿತಿ ಅವಧಿಯನ್ನು 3ರಿಂದ 5ವರ್ಷಕ್ಕೆ ಹೆಚ್ಚಿಸುವ ಉದ್ದೇಶಿದ ತಿದ್ದುಪಡಿ, ಭಾನುವಾರ ನಡೆದ ಪರಿಷತ್ತಿನ ಸಭೆಯಲ್ಲಿ ಕೆಲವರನ್ನು ರೊಚ್ಚಿಗೆಬ್ಬಿಸಿತು.

ದಿಕ್ಕಾರ, ಕೂಗಾಟಗಳ ನಡುವೆ ಸಭೆ ಮೀನಿನ ಮಾರುಕಟ್ಟೆಯಂತೆ ಪರಿವರ್ತನೆಯಾದಾಗ, ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಪಾಟೀಲ, ಸಭೆಯನ್ನು ಮುಂದೂಡಿದರು.

ಪರಿಷತ್ತಿನ ಅಧ್ಯಕ್ಷರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಕನ್ನಡ ಸಂಘರ್ಷ ಸಮಿತಿ. ಕೋಡಿಹೊಸಳ್ಳಿ ರಾಮಣ್ಣ, ಕನ್ನಡ ಗೆಳೆಯರ ಬಳಗದ ರಾ.ನಂ. ಚಂದ್ರಶೇಖರ್‌, ಬೆಂಗಳೂರು ನಗರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಾರ್ಶ್ವನಾಥ ಮುಂತಾದವರು ಚಂದ್ರಶೇಖರ ಪಾಟೀಲ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X